ಬೈರಂಪಳ್ಳಿ: ಇಂದು ಕೃಷಿ ಮಾಹಿತಿ
Update: 2017-10-28 17:07 GMT
ಉಡುಪಿ, ಅ.28: ಉಡುಪಿ ಜಿಲ್ಲಾ ಕೃಷಿಕ ಸಂಘ ಹಿರಿಯಡಕ ವಲಯ ಸಮಿತಿ ಆಯೋಜಿಸಿರುವ ಅಡಿಕೆ ಮತ್ತು ಕಾಳುಮೆಣಸು ಕೃಷಿ ಮಾಹಿತಿ ಕಾರ್ಯಕ್ರಮ ನಾಳೆ ರವಿವಾರ ಸಂಜೆ 4:30ಕ್ಕೆ ಬೈರಂಪಳ್ಳಿ ನಾಗರಾಜ ಕುಂಜಿತ್ತಾಯರ ತೋಟದಲ್ಲಿ ನಡೆಯಲಿದೆ.
ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ, ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಬಾಗವಹಿಸಲಿದ್ದಾರೆ.
ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ಅಡಿಕೆ ಹಾಗು ಕಾಳು ಮೆಣಸು ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿಯನ್ನು ನೀಡಲಾಗುವುದು ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.