ಗಾಂಜಾ ಸೇವನೆ: ಮೂವರ ಬಂಧನ
Update: 2017-10-28 17:18 GMT
ಮಂಗಳೂರು, ಅ. 28: ಗಾಂಜಾ ಸೇವನೆ ಆರೋಪದಲ್ಲಿ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕುಲಶೇಖರದ ಕಾರ್ತಿಕ್ (20), ಶಕ್ತಿನಗರದ ರಾಕೇಶ್ ಕುಮಾರ್ (22) ಮತ್ತು ತಿಲಕ್ರಾಜ್ ಬಂಧಿತ ಆರೋಪಿಗಳು.
ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮೂರು ಕಡೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ತಿಕ್ನನ್ನು ಕೆಪಿಟಿ ಬಳಿಯಿಂದ ಬಂಧಿಸಿದ್ದರೆ, ರಾಕೇಶ್ನನ್ನು ಬಲ್ಮಠದ ಶಾಂತಿ ನಿಲಯ ಹಾಗೂ ತಿಲಕ್ರಾಜ್ನನ್ನು ಕದ್ರಿಯ ಜೋಗಿ ಮಠದಿಂದ ಬಂಧಿಸಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.