×
Ad

ನ.6: ಉಪನ್ಯಾಸ ಕಾರ್ಯಕ್ರಮ

Update: 2017-11-03 21:54 IST

ಮಂಗಳೂರು, ನ.3: ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ವತಿಯಿಂದ ನ.6ರಂದು ಸಂಜೆ 5 ಗಂಟೆಗೆ ನಗರದ ಬಲ್ಮಠದಲ್ಲಿರುವ ಸಹೋದಯ ಸಂಭಾಂಗಣದಲ್ಲಿ ತುಳುನಾಡಿನ ಜನ ಸಂಸ್ಕೃತಿ ಮತ್ತು ಹೊಸ ತಲೆಮಾರು ಎಂಬ ವಿಷಯದ ಕುರಿತು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯು ಉಪನ್ಯಾಸ, ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹೊಸದಿಲ್ಲಿಯ ಜೆಎನ್‌ಯುವಿನಲ್ಲಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಜನಪದ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಉಪನ್ಯಾಸ ನೀಡಲಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News