ಬಾವಿಗೆ ಬಿದ್ದು ಮೃತ್ಯು
Update: 2017-11-10 22:06 IST
ಉಡುಪಿ, ನ.10: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ನ.9ರಂದು ಮಧ್ಯಾಹ್ನ ವೇಳೆ ಕೊರಂಗ್ರಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೊರಂಗ್ರಪಾಡಿಯ ನಿವಾಸಿ ಕೆ.ರಮೇಶ ಶೆಟ್ಟಿ(64) ಎಂದು ಗುರು ತಿಸಲಾಗಿದೆ. ಇವರು ಮನೆಯ ಆವರಣವಿಲ್ಲದ ಬಾವಿಗೆ ಕೋಳಿ ಬಿದ್ದಿರುವು ದನ್ನು ನೋಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.