ಗಾಣೆಮಾರ್: ಅಲ್ ಮುಸಾಬಖತುಲ್ ಅದಬಿಯ್ಯ ಕಾರ್ಯಕ್ರಮ

Update: 2017-11-14 10:25 GMT

ಮಂಗಳೂರು, ನ.14: ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ಉಸ್ತಾದರ ಕರ್ನಾಟಕದ ಹಳೆ ವಿದ್ಯಾರ್ಥಿಗಳ ಸಂಘಟನೆ ಮುಹ್ಯಿಸ್ಸುನ್ನ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗಾಗಿ ‘ಅಲ್-ಮುಸಾಬಳತುಲ್ ಅದಬಿಯ್ಯ-17’ ಮುತಅಲ್ಲಿಂ ಪ್ರತಿಭಾ ಸಮ್ಮೇಳನವು ಇತ್ತೀಚೆಗೆ ಗಾಣೆಮಾರಿನ ಮಜ್ಲಿಸ್ ಕ್ಯಾಂಪಸ್ ನಡೆಯಿತು.

ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಶೈಖುನಾ ಬೇಕಲ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೈಯದ್ ನಿಝಾಮುದ್ದೀನ್ ಬಾಫಖಿ ತಂಙಳ್ ದುಆ ನೇರವೇರಿಸಿದರು. ಮುಹ್ಯಿಸ್ಸುನ್ನದ ಅಧ್ಯಕ್ಷ ಅಶ್ರಫ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು.

ಮಧ್ಯಾಹ್ನದ ಬಳಿಕ ನಡೆದ ಮುಹ್ಯಿಸ್ಸುನ್ನ ಸಂಗಮ ಹಾಗೂ ತರ್ಬಿಯತ್ ಕ್ಯಾಂಪ್‌ಗೆ ಮಂಜೇರಿ ಜಾಮಿಯಾ ಹಿಕಮಿಯ್ಯ ಮುದರ್ರಿಸ್, ಮುಹ್ಯಿಸ್ಸುನ್ನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೈಖುನಾ ಹಸನ್ ಬಾಖವಿ ಪಲ್ಲಾರ್ ನೇತೃತ್ವ ನೀಡಿದರು.

ಎರಡು ದಿನಗಳಲ್ಲಿ ನಡೆದ ಮೂವತ್ತೊಂದು ಸ್ವರ್ಧೆಗಳಲ್ಲಿ ಮುಹ್ಯಿಸ್ಸುನ್ನ ಸಿಲೆಬಸ್ ಪ್ರಕಾರ ಕಾರ್ಯಾಚರಿಸುತ್ತಿರುವ ಕರ್ನಾಟಕದ ಹನ್ನೊಂದು ದರ್ಸ್‌ಗಳ ಸುಮಾರು ಮುನ್ನೂರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಹ್ಯಿಸ್ಸುನ್ನ ದರ್ಸ್ ಉಕ್ಕುಡ, ಮಜ್ಲಿಸ್ ಗಾಣೆಮಾರ್ ಹಾಗೂ ದಿಕ್ರಾ ಮೂಡುಬಿದಿರೆ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದವು. ಸೀನಿಯರ್ ವಿಭಾಗದಲ್ಲಿ ಹಾಫಿಳ್ ಹಾಶಿರ್ ಗಾಣೆಮಾರ್ ಹಾಗೂ ಜೂನಿಯರ್ ವಿಭಾಗದಲ್ಲಿ ದಾವೂದ್ ಉಕ್ಕುಡ ಕಲಾ ಪ್ರತಿಭೆಗಳಾಗಿ ಆಯ್ಕೆಗೊಂಡರು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಎಸ್.ವೈ.ಎಸ್. ದ.ಕ. ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಖ್ ಸಖಾಫಿ ಕೌಡೇಲು, ಮಜ್ಲಿಸ್ ಗಾಣೆಮಾರ್ ಚೆಯರ್‌ಮ್ಯಾನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್ ಕಾಮಿಲ್, ನೌಫಲ್ ಸಖಾಫಿ ಕಳಸ, ಇಸ್ಮಾಯೀಲ್ ಸಅದಿ ಮಾಚಾರ್, ಪಂಪ್‌ವೆಲ್ ಮಸ್ಜಿದುತ್ತಖ್ವಾ ಖತೀಬ್ ಹಾಫಿಳ್ ಅಬ್ದುಲ್ ರಹ್ಮಾನ್ ಸಖಾಫಿ ಚಿಯ್ಯೂರು, ಬಾವುಟಗುಡ್ಡೆ ಮಸೀದಿಯ ಖತೀಬ್ ಸ್ವದಕತುಲ್ಲಾ ನದ್ವಿ ಮಾಣಿ, ಬದ್ರುದ್ದೀನ್ ಅಝ್ಹರಿ ಕೈಕಂಬ, ಹಾಫಿಳ್ ಅಹ್ಮದ್ ಶರೀಫ್ ಸಖಾಫಿ ಉಕ್ಕುಡ, ಫಾರೂಕ್ ಸಖಾಫಿ ಕಾಟಿಪಪಳ್ಳ ಮೊದಲಾದವರು ಉಪಸ್ಥಿತರಿದ್ದರು.

 ಮುಹ್ಯಿಸ್ಸುನ್ನ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪಾತೂರು ಸ್ವಾಗತಿಸಿದರು. ಮುಸಾಬಖ ಸಮಿತಿ ಕನ್ವೀನರ್ ಸಿದ್ದೀಕ್ ಸಖಾಫಿ ಕಾಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News