ಕಸ್ತೂರಿ ಸಿರಿಗನ್ನಡ ವೇದಿಕೆ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಪಿ ಪಿ ಛಬ್ಬ

Update: 2017-11-14 13:28 GMT

ಮುಂಡಗೋಡ, ನ. 14: ಕಸ್ತೂರಿ ಸಿರಿಗನ್ನಡ ವೇದಿಕೆ ಉತ್ತರಕನ್ನಡ ಜಿಲ್ಲಾ ಘಟಕ ಮುಂಡಗೋಡ ವತಿಯಿಂದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸಭೆಯಲ್ಲಿ ತಿರ್ಮಾನಿಸಿದ್ದು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಡಾ. ಪಿ ಪಿ ಛಬ್ಬ ಇವರನ್ನು ಆಯ್ಕೆ ಮಾಡಲಾಗಿದೆ.

ಇದರ ಪ್ರಯುಕ್ತ ಮಾನ್ಯ ಸರ್ವಾಧ್ಯಕ್ಷರನ್ನು ಕ.ಸಿ.ವೇ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಆಹ್ವಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ರಾಧಾ ಬಾಯಿ ಶಿರಾಲಿ, ಜಿಲ್ಲಾಧ್ಯಕ್ಷ ಎಸ್.ಡಿ.ಮುಡೆಣ್ಣವರ, ಸಹದೇವ ನಡಗೇರಿ, ವಸಂತ ಕೊಣಸಾಲಿ, ಎಸ್.ಬೋರಕರ, ವಿನಾಯಕ ಶೇಟ, ಶಿವಾನಂದ ವಾಲಿಶೆಟ್ಟರ, ಮಲ್ಲಿಕಾರ್ಜುನ ಸುಣಗಾರ, ರಮೇಶ ಅಂಬಿಗೇಋ, ಶಶಿಕಲಾ ಮಿರಜಕರ, ಮಹೇಶ ಹೆಗಡೆ ಗೋಪಾಲ ಕನಸೆ, ಲಿಂಗರಾಜ ಕನ್ನೂರ, ಸುಬ್ರಾಯ್ ರೇವಣಕರ, ಎಸ್.ಎ.ದೊಡ್ಡಮನಿ, ತಾರಾಮತಿ ಕುತ್ತೆ, ಜ್ವಾಲಾಮಾಲಿನಿ ಹದಳಗಿ, ಬಾಲಚಂದ್ರ ಹೆಗಡೆ, ನಾಗರಾಜ ಅರ್ಕಸಾಲಿ, ಮುತ್ತನ್ಣ ಮಾಳಾಪುರ, ಗೌರಮ್ಮ ಕೊಳ್ಳನವರ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News