×
Ad

ಹುಣಸೂರು: ಅಪಘಾತದ ಗಾಯಾಳುಗಳು ಚೇತರಿಕೆ

Update: 2017-11-15 21:20 IST

ಮಂಗಳೂರು, ನ.15: ಮೈಸೂರು ಸಮೀಪದ ಹುಣಸೂರು ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರ ಪೈಕಿ 11 ಮಂದಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ದಾಖಲಿಸಲಾಗಿದ್ದು, ಇದೀಗ ಎಲ್ಲರೂ ಚೇತರಿಸುತ್ತಿದ್ದಾರೆ.

ಸಾಯಿರಾ ಬಾನು, ಆತಿಕಾ, ಖತೀಜಮ್ಮ, ಫಮೀದಾ, ಸೈಯದ್ ಬಾವಾ, ಶಿಬ್ಲಾ, ಶಹೀಮ್, ರಲಿಯಾ, ಇಶಾ, ಶಮೀಝ್, ಮುಮ್ತಾಝ್ ಗಾಯಗೊಂಡವರಾಗಿದ್ದು, ಆ ಪೈಕಿ ಮುಮ್ತಾಝ್ ತುರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ.

ಉಳಿದಂತೆ ರಾಹಿಲ್, ಅನ್ವೀಝ್, ಶಮಾಲ್ ಪ್ರಥಮ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಅಬ್ದುಲ್ ಹಮೀದ್, ಶೇಖ್ ಹಕೀಫ್, ಮುಹಮ್ಮದ್ ಇಕ್ಬಾಲ್ ಅವರ ಅಂತ್ಯಕ್ರಿಯೆಯು ಮಂಗಳವಾರ ರಾತ್ರಿ ಉಳ್ಳಾಲದಲ್ಲಿ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News