ಬಾವಿಗೆ ಬಿದ್ದು ಮೃತ್ಯು
Update: 2017-11-15 22:50 IST
ಕಾರ್ಕಳ, ನ.15: ಮನೆಯ ಬಾವಿಗೆ ಪಂಪ್ಸೆಟ್ ಅಳವಡಿಸುವ ವೇಳೆ ಬಾವಿಯ ದಡೆ ಮರ ಮುರಿದು ದಡೆಮರ ಸಹಿತ ಬಾವಿಗೆ ಅಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಿಟ್ಟೆ ಗ್ರಾಮದ ಮದನಾಡು ದರ್ಖಾಸು ಎಂಬಲ್ಲಿಂದ ವರದಿಯಾಗಿದೆ.
ಮೃತರನ್ನು ನಾರಾಯಣ ಕುಲಾಲ್ ಎಂಬವರ ಪುತ್ರ ದಿನೇಶ್ (41) ಎಂದು ಗುರುತಿಸಲಾಗಿದೆ. ಇವರು ನ.14ರಂದು ಮನೆ ಸಮೀಪದ ಬಾವಿಗೆ ಪಂಪ್ಸೆಟ್ ಅಳವಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.