×
Ad

ಹರಿಕ್ರಷ್ಣ ಬಂಟ್ವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ರಮಾನಾಥ ರೈ

Update: 2017-11-16 15:00 IST

ಮಂಗಳೂರು, ನ.16: ಆಧಾರ ರಹಿತವಾಗಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಸದಸ್ಯ ಹರಿಕ್ರಷ್ಣ ಬಂಟ್ವಾಳ್ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪತ್ರಿಕೆಗೆ ತಿಳಿಸಿದ್ದಾರೆ.

ಅಕ್ರಮ ಭೂಕಬಳಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ  ಮಾಡಿರುವ ಆರೋಪಗಳಿಗೆ ಈಗಾಗಲೇ ಮಾಧ್ಯಮ ಗಳಿಗೆ ದಾಖಲೆಯನ್ನು ನೀಡಿ ಸತ್ಯ ಸಂಗತಿ ತಿಳಿಸಿದ್ದೇನೆ. ಆ ಬಳಿಕವೂ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ  ಕಾನೂನು ಬದ್ಧ  ಹೋರಾಟ ನಡೆಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಹರಿಕೃಷ್ಣ ಬಂಟ್ವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ದರಿಸಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News