ನ.17: ಕದ್ರಿ ಲಕ್ಷ ದೀಪೋತ್ಸವ
Update: 2017-11-16 19:00 IST
ಮಂಗಳೂರು, ನ.16: ಶ್ರಿ ಕ್ಷೇತ್ರ ಕದ್ರಿ ಲಕ್ಷ ದೀಪೋತ್ಸವ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನ.17ರಂದು ಸಂಜೆ 5ಕ್ಕೆ ಆರಂಭಗೊಳ್ಳಲಿದೆ.
ಕುಂಜಾರು ಗಿರಿಗಿರಿ ಬಳಗ ಮತ್ತು ಮದ್ಧರಿ ನಾಮಸಂಕೀರ್ತನಾ ಬಳಗ, ಕಳವಾರು, ಬಾಳ, ಪ್ರಭಜನ ಸಂಕೀರ್ತನ ಬಳಗ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಲಿದೆ. ಆಸಕ್ತ ತಂಡಗಳಿಗೆ ಭಾಗವಹಿಸಲು ಅವಕಾಶವಿದೆ ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ