ಎಸ್‌ವೈಎಸ್ ರಾಜಾಧ್ಯ್ಯಕ್ಷರಾಗಿ ಜಿ.ಎಂ.ಕಾಮಿಲ್ ಸಖಾಫಿ, ಕಾರ್ಯದರ್ಶಿಯಾಗಿ ಝೈನಿ ಕಾಮಿಲ್ ಆಯ್ಕೆ

Update: 2017-11-19 11:59 GMT

ಮಂಗಳೂರು, ನ.19: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್‌ವೈಎಸ್)ದ ನೂತನ ಸಾಲಿನ ರಾಜ್ಯಾಧ್ಯಕ್ಷರಾಗಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು ಪ್ರಧಾನ ಕಾರ್ಯದರ್ಶಿಯಾಗಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ತಲಪಾಡಿ ಆಯ್ಕೆಯಾಗಿದ್ದಾರೆ. ಮಿತ್ತೂರು ಕೆಜಿಎನ್ ದಅ್ವಾ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

  ಕೋಶಾಧಿಕಾರಿಯಾಗಿ ಎ.ಯೂಸುಫ್ ಹಾಜಿ ಉಪ್ಪಳ್ಳಿ ಚಿಕ್ಕಮಗಳೂರು, ಉಪಾಧ್ಯಕ್ಷರಾಗಿ ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು, ಸೈಯದ್ ಎ.ಪಿ.ಎಸ್.ಹುಸೈನ್ ಅಹ್ದಲ್ ತಂಙಳ್ ಬಾಖವಿ ಚಿಕ್ಕಮಗಳೂರು, ಜಿ.ಎಂ.ಹೈದರಲಿ ಕಾಮಿಲ್ ನಿಝಾಮಿ ಶಿವಮೊಗ್ಗ, ಹಾಜಿ ಕೆ.ಮುಹಿಯುದ್ದೀನ್ ಗುಡ್‌ವಿಲ್ ಕಾಪು, ಕಾರ್ಯದರ್ಶಿಗಳಾಗಿ ಎಂ.ಎ.ಸಿದ್ದೀಕ್ ಸಖಾಫಿ ಮೂಳೂರು, ಯಾಕೂಬ್ ಯೂಸುಫ್ ಬೆಂಗಳೂರು, ಅಬ್ದುಲ್ ಹಕೀಂ ಕೊಡ್ಲಿಪೇಟೆ, ಉಸ್ಮಾನ್ ಅಬ್ದುಲ್ಲಾ ಎಮ್ಮೆಮಾಡು ಕೊಡಗು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೈಯದ್ ಇಸ್ಮಾಯೀಲ್ ತಂಙಳ್ ಮದನಿ ಉಜಿರೆ, ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಸೈಯದ್ ಶಹೀದುದ್ದೀನ್ ಬಾಖವಿ ಅಲ್ ಬುಖಾರಿ ಶಿವಮೊಗ್ಗ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಟ.ಎಂ.ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು, ಅಶ್ರಫ್ ಕಿನಾರ ಮಂಗಳೂರು, ಕೆ.ಕೆ.ಮುಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್, ಅಬ್ದುಲ್‌ಹಮೀದ್ ಬೀಜಕೊಚ್ಚಿ ಸುಳ್ಯ, ಬಾವಾ ಫಕ್ರುದ್ದೀನ್ ಕೃಷ್ಣಾಪುರ, ಖಾಸಿಂ ಪದ್ಮುಂಜ ಬೆಳ್ತಂಗಡಿ, ಎಂ.ವೈ.ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಕೆ.ಎಚ್.ಮುಹಮ್ಮದ್ ಕುಂಞಿ ಹಾಜಿ ಪಾಲಿಬೆಟ್ಟ, ಎಂ.ಇ.ಉಮರ್ ಸಖಾಫಿ ಎಡಪ್ಪಾಲಂ, ಪಿ.ಯು.ಹನೀಫ್ ಸಖಾಫಿ ಕೊಂಡಂಗೇರಿ, ಪಿ.ಎ. ಯೂಸುಫ್ ಕೊಂಡಂಗೇರಿ, ಅಬೂಬಕರ್ ಕಡಂಗ, ಮುಸ್ತಫಾ ಸಅದಿ ಮೂಳೂರು, ಅಬೂಬಕರ್ ಮುಸ್ಲಿಯಾರ್ ಹೆಜಮಾಡಿ, ಪಿ.ಎಂ.ಸೈದಲವಿ ಸಖಾಫಿ ಸಕಲೇಶಪುರ, ಹೈದರ್ ಮೊಗಳ್ ಆಚೆಂಗಿ, ಇದಿನಬ್ಬ ತರೀಕೆರೆ, ಹನೀಫ್ ಬೆಜ್ಜವಳ್ಳಿ ಆಯ್ಕೆಯಾದರು.

ಹಾಲಿ ರಾಜ್ಯಾಧ್ಯಕ್ಷ ಕೆಪಿ.ಹುಸೈನ್ ಸಅದಿ ಕೆ.ಸಿ .ರೋಡ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಮಾಣಿ ಉಸ್ತಾದ್ ಉದ್ಘಾಟಿಸಿದರು. ಕರ್ನಾಟಕ ಸುನ್ನೀ ಕೊ ಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ಮಂಜನಾಡಿ ಶುಭ ಹಾರೈಸಿದರು.

ರಾಜ್ಯ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಖಾಝಿ ಬೇಕಲ್ ಉಸ್ತಾದ್ ನೂತನ ಸಮಿತಿಯನ್ನು ಘೋಷಿಸಿದರು. ಎಸ್.ಪಿ.ಹಂಝ ಸಖಾಫಿ ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು

ಡಿ.ಕೆ.ಉಮರ್ ಸಖಾಫಿ ಸ್ವಾಗತಿಸಿದರು. ಜಿ.ಎಂ.ಕಾಮಿಲ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News