ಜಮ್ಮು ಕಾಶ್ಮೀರ: ಶಸ್ತ್ರಾಸ್ತ್ರ ತ್ಯಜಿಸಿ ಹೆತ್ತವರನ್ನು ಸೇರಿದ ಮತ್ತೋರ್ವ ಯುವಕ

Update: 2017-11-20 15:29 GMT

 ಶ್ರೀನಗರ, ನ. 20: ಭಯೋತ್ಪಾದಕ ಸಂಘಟನೆಗೆ ಸೇರಿದ ಯುವಕನೋರ್ವ ಹೆತ್ತವರ ಮನವಿಗೆ ಸ್ಪಂದಿಸಿ ಹಿಂಸೆಯ ದಾರಿ ತ್ಯಜಿಸಿ ದಕ್ಷಿಣ ಕಾಶ್ಮೀರದಲ್ಲಿರುವ ತನ್ನ ನಿವಾಸಕ್ಕೆ ಹಿಂದಿರುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಸಾಮಾಜಿಕ ಜಾಲ ತಾಣದಲ್ಲಿ ತಾಯಿಯೋರ್ವರು ದುಃಖದಿಂದ ಮನವಿ ಮಾಡಿದ ಹಿನ್ನೆಲೆಯಲ್ಲಿ ಭಯೋತ್ಪಾದಕ ಸಂಘಟನೆ ಸೇರಿದ್ದ ಫುಟ್ಬಾಲ್ ಆಟಗಾರ ಮಜೀದ್ ಖಾನ್ ಶಸ್ತ್ರಾಸ್ತ್ರ ತ್ಯಜಿಸಿ ಮನೆಗೆ ಹಿಂದಿರುಗಿದ ಮೂರು ದಿನಗಳ ಬಳಿಕ ಈ ಘಟನೆ ನಡೆದಿದೆ.

ಹೆತ್ತವರ ಮನವಿಗೆ ಸ್ಪಂದಿಸಿದ ಯುವಕನೋರ್ವ ತಾನು ಸೇರಿದ್ದ ಭಯೋತ್ಪಾದಕ ಸಂಘಟನೆ ತ್ಯಜಿಸಿ ದಕ್ಷಿಣ ಕಾಶ್ಮೀರದಲ್ಲಿರುವ ನಿವಾಸಕ್ಕೆ ಹಿಂದಿರುಗಿದ್ದಾನೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ. ಯುವಕನ ಬಗ್ಗೆ ವಿವರ ನೀಡಲು ನಿರಾಕರಿಸಿರುವ ಅವರು, ಯುವಕನ ಭದ್ರತೆ ಅತೀ ಮುಖ್ಯವಾದುದು ಎಂದಿದ್ದಾರೆ.

 ಈ ನಡುವೆ ಶೋಪಿಯಾನ ಜಿಲ್ಲೆಯ ಕಪ್ರಿನ್‌ನ ಯುವಕ ಆಶಿಕ್ ಹುಸೈನ್ ಭಟ್ ಸಾಮಾಜಿಕ ಜಾಲ ತಾಣದಲ್ಲಿ ಹೆತ್ತವರ ವೀಡಿಯೊ ಮನವಿ ವೀಕ್ಷಿಸಿ ಮನೆಗೆ ಹಿಂದಿರುಗಿದ್ದಾನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News