ನ. 21ರಂದು ಮಿತ್ತೂರಿನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್

Update: 2017-11-20 16:58 GMT

ಮಾಣಿ, ನ. 20: ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಆಶ್ರಯದಲ್ಲಿ ನ. 21ರಂದು ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್  ನಲ್ಲಿ ಬೆಳಗ್ಗೆ 9ಗಂಟೆಗೆ ಮೌಲಿದ್ ಪಾರಾಯಣ ಹಾಗೂ 10ಗಂಟೆಗೆ ಸಭಾ ಕಾರ್ಯಕ್ರಮ ನೆರವೇರಲಿದೆ.

ಸಂಸ್ಥೆಯ ಅಧ್ಯಕ್ಷ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್  ಮಾಣಿ ಅಧ್ಯಕ್ಷತೆ ವಹಿಸುವರು. ಅಸಯ್ಯಿದ್ ಹಂಝ ತಂಙಳ್ ಪಾಟ್ರಕೋಡಿ ದುಆ ನೆರವೇರಿಸುವರು.

ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹೀಂ ಫೈಝಿ ಕನ್ಯಾನ ಉದ್ಘಾಟಿಸುವರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸಯ್ಯಿದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ ಮುಖ್ಯಭಾಷಣ ಮಾಡುವರು.

ಕಂಕನಾಡಿ ಉಸ್ತಾದ್, ವಳವೂರು ಉಸ್ತಾದ್, ಪುಳಿಕ್ಕೂರು ಫೈಝಿ, ತೋಕೆ ಸಖಾಫಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿಎಂ ಕಾಮಿಲ್ ಸಖಾಫಿ, ಇಬ್ರಾಹೀಂ ಸ‌ಅದಿ ಮಾಣಿ, ಶರೀಫ್ ಸಖಾಫಿ ಮಾಣಿ ಮೊದಲಾದವರು ಭಾಗವಹಿಸುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News