ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2017-11-20 17:03 GMT

ಹೆಬ್ರಿ, ನ.20: ವೈಯಕ್ತಿಕ ಕಾರಣದಿಂದ ಮನನೊಂದ ಕೆಂಜೂರು ಗ್ರಾಮದ ಅಮುಜಿ ಪುಚ್ಚಾಲ ನಿವಾಸಿ ಕೃಷ್ಣ ಕುಲಾಲ(46) ಎಂಬವರು ನ.19ರಂದು ಮಧ್ಯಾಹ್ನ ವೇಳೆ ಕಳ್ತೂರು ಗ್ರಾಮದ ಸಂತೆಕಟ್ಟೆಯ ಚಾಪಾಲಿಜೆಡ್ಡು ಎಂಬಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಮಂಗಳೂರು ನೆಲ್ಲಿಕಾರು ಬೋರುಗುಡ್ಡೆ ನಿವಾಸಿ ಗೋಪಾಲ ಪೂಜಾರಿ(60) ಎಂಬವರು ನಲ್ಲೂರು ಗ್ರಾಮದ ಚಂಡೆ ಎಂಬಲ್ಲಿರುವ ಅರಣ್ಯದಲ್ಲಿ ನ.5ರಿಂದ 19ರ ಮಧ್ಯಾವಧಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಮಹಿಳೆ ಮೃತ್ಯು

ಶಂಕರನಾರಾಯಣ, ನ.20: ಮಹಿಳೆಯೊಬ್ಬರು ವಿಷ ಪದಾರ್ಥ ಸೇವಿಸಿ ಮೃತಪಟ್ಟ ಘಟನೆ ಅಲ್ಬಾಡಿ ಮೂರುಕೈ ಎಂಬಲ್ಲಿ ನಡೆದಿದೆ.

ಮೃತರನ್ನು ಅಲ್ಬಾಡಿ ಮೂರುಕೈಯ ಸಂಜೀವ ಶೆಟ್ಟಿ ಎಂಬವರ ಪತ್ನಿ ಲಲಿತಾ ಶೆಟ್ಟಿ(57) ಎಂದು ಗುರುತಿಸಲಾಗಿದೆ. ಇವರು ನ.7ರಂದು ಮನೆಯಲ್ಲಿ ಮಂಡಿ ನೋವಿನ ಕಾಯಿಲೆಯಿಂದಲೋ ಅಥವಾ ಅವರ ತಿಳುವಳಿಕೆಗೆ ಬಾರದೆಯೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಅವರು ನ.18ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News