‘ಗಾಣಿಗ ಸಂಗಮ 2018’: ಆಮಂತ್ರಣ ಪತ್ರಿಕೆ ಬಿಡುಗಡೆ

Update: 2017-11-20 17:08 GMT

ಮಂಗಳೂರು, ನ. 20: ಗಾಣಿಗಾಸ್ ಯಾನೆ ಸಫಲಿಗಾಸ್ ಪರಿವಾರ್ ವತಿಯಿಂದ 3ನೆ ವಾರ್ಷಿಕ ‘ಗಾಣಿಗ ಸಂಗಮ 2018’ ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜ.21ರಂದು ನಗರದ ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅತ್ತಾವರದ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಾಣಿಗಾಸ್ ಯಾನೆ ಸಫಲಿಗಾಸ್ ಪರಿವಾರ್ ತಂಡದ ಗೌರವಾಧ್ಯಕ್ಷ ಜನಾರ್ದನ ಅರ್ಕುಳ, ಉಮಾಮಹೇಶ್ವರ ದೇವಸ್ಥಾನದ ಮುಖ್ಯಸ್ಥ ಪ್ರೇಮ್ ಸಾಲ್ಯಾನ್ ಬಿಜೈ, ದ.ಕ. ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ಮತ್ತು ರೇಣುಕಾ, ಶಾಲಿನಿ, ಲತಾ, ಲಕ್ಮೀತ, ದೀಪಾ, ನಿತಿನ್ ಪುತ್ರನ್, ಸುದರ್ಶನ್, ನಿತೀನ್, ಪುಷ್ಪರಾಜ್ ಪುತ್ರನ್, ವಿನೋದ್, ವಿಕ್ಕಿ, ಪ್ರಮೋದ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News