ದ.ಕ. ವಕ್ಫ್ ಸಮಿತಿ ಅಧ್ಯಕ್ಷರಾಗಿ ಕಣಚೂರು ಮೋನು ನೇಮಕ

Update: 2017-11-20 17:40 GMT
ಯು.ಕೆ. ಮೋನು ಕಣಚೂರು

ಮಂಗಳೂರು, ನ. 20: ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಯು.ಕೆ. ಮೋನು ಕಣಚೂರು ಅವರನ್ನು ನೇಮಕ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಬಾವಾ ನೆಕ್ಕರೆ ಹಾಗೂ ಶಾಹುಲ್ ಹಮೀದ್ ಗುರುಪುರ, ಸದಸ್ಯರಾಗಿ ಡಿ.ಎಂ.ಅಸ್ಲಂ ಬಂದರ್, ಬಾಶಾ ತಂಙಳ್, ಅಲ್ತಾಫ್ ಕುಂಪಲ, ಕರೀಂ ಗೇರುಕಟ್ಟೆ, ಯು.ಕೆ. ಅಬ್ದುಲ್ ಖಾದರ್ ಕೋಡಿ, ರಶೀದ್ ವಿಟ್ಲ, ನೂರುದ್ದೀನ್ ಸಾಲ್ಮರ, ಯು.ಎಸ್. ಅಬೂಬಕ್ಕರ್ ಮುಕ್ಕಚ್ಚೇರಿ, ಅಬೂಸಾಲಿ ಅಂಬ್ಲಮೊಗರು, ಎಂ. ಅಬ್ದುಲ್ ಖಾದರ್ ಬಜ್ಪೆ, ಅಬ್ದುಲ್ ಜಲೀಲ್ ಕೃಷ್ಣಾಪುರ, ಉಮ್ಮರ್ ಫಜೀರ್, ನಝೀರ್ ಮಠ, ಕೆ.ಎಂ. ಹನೀಫ್ ಕೆಯ್ಯೂರು, ಸುಲೈಮಾನ್ ಕಲಾಯಿ, ಬದ್ರುದ್ದೀನ್ ಉಳ್ಳಾಲ, ಉಸ್ಮಾನ್ ತಲಪಾಡಿ, ಇಸ್ಮಾಯಿಲ್ ನೆಲ್ಯಾಡಿ ಅವರನ್ನು ನೇಮಿಸಲಾಗಿದೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಅಹಾರ ಸಚಿವ ಯು.ಟಿ. ಖಾದರ್ ಅವರು ಸಮಾಲೋಚಿಸಿ ದ.ಕ. ಜಿಲ್ಲಾ ವಕ್ಫ್ ಸಮಿತಿಗೆ ಪಟ್ಟಿ ಅಂತಿಮ ಗೊಳಿಸಿದ್ದು, ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಅವರು ಪಟ್ಟಿಗೆ ಅನುಮೋದನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News