ಆದಿತ್ಯನಾಥ್ ರ‍್ಯಾಲಿಯಲ್ಲಿ ಪಾಲ್ಗೊಂಡ ಮಹಿಳೆಯ ಬುರ್ಖಾ ತೆಗೆಸಿದ ಪೊಲೀಸರು!

Update: 2017-11-21 16:27 GMT

ಉತ್ತರ ಪ್ರದೇಶ, ನ.21: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಹಿಳೆಯೊಬ್ಬರ ಬುರ್ಖಾ ತೆಗೆಸಿದ ಘಟನೆ ಇಲ್ಲಿನ ಬಲ್ಲಿಯಾದಲ್ಲಿ ನಡೆದಿದೆ.

ಬುರ್ಖಾ ಧರಿಸಿದ್ದ ಮಹಿಳೆಯ ಸಮೀಪ ಬಂದ ಮಹಿಳಾ ಪೊಲೀಸರು ಬುರ್ಖಾ ತೆಗೆಯುವಂತೆ ಹೇಳಿದ್ದಾರೆ. ಈ ಘಟನೆಯನ್ನು ಪತ್ರಕರ್ತರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಬುರ್ಖಾ ತೆಗೆದ ನಂತರ ಅದನ್ನು ಮಡಚಿ ಇಡುವಂತೆ ಮಹಿಳಾ ಪೊಲೀಸರು ಹೇಳಿದ್ದು, ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಬುರ್ಖಾವನ್ನು ತೆಗೆದುಕೊಂಡು ಹೋಗಿದ್ದಾರೆ.

ತನ್ನನ್ನು ಸೈರಾ ಎಂದು ಪರಿಚಯಿಸಿಕೊಂಡ ಮಹಿಳೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದು, ಸಂಪ್ರದಾಯದ ಪ್ರಕಾರ ನಾನು ಬುರ್ಖಾ ಧರಿಸಿಕೊಂಡು ಬಂದಿದ್ದೆ. ಅದು ಕಪ್ಪು ಬಣ್ಣದ್ದಾದ್ದರಿಂದ ಪೊಲೀಸರು ತೆಗೆಸಿದ್ದಾರೆ. ಹಿಂದಿನಿಂದಲೇ ನಾನು ಬಿಜೆಪಿ ಕಾರ್ಯಕರ್ತೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News