‘ಪದ್ಮಾವತಿ’ ವಿವಾದ: 300ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ

Update: 2017-11-27 13:05 GMT

ಜೈಪುರ, ನ.27: ಹಿಂದಿ ಸಿನೆಮ ‘ಪದ್ಮಾವತಿ’ಯನ್ನು ವಿರೋಧಿಸಿ ರಾಜಸ್ತಾನದ ಚಿತ್ತೋರ್‌ಗಡದಲ್ಲಿ ಪ್ರತಿಭಟನೆ ನಡೆಸಿದ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಬಂಧಿತರಲ್ಲಿ 20 ಮಹಿಳೆಯರೂ ಸೇರಿದ್ದಾರೆ. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಸಂದರ್ಭ ಅವರನ್ನು ತಡೆಯಲಾಗಿದೆ. ಬಳಿಕ 304 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಚಿತ್ತೋರ್‌ಗಡ ಪೊಲೀಸ್ ಠಾಣಾಧಿಕಾರಿ ಓಂಪ್ರಕಾಶ್ ಹೇಳಿದ್ದಾರೆ. ರಾಜಸ್ತಾನದ ಚಿತ್ತೋರ್ ರಜಪೂತ ದೊರೆ ರತನ್ ಸಿಂಗ್ ಮತ್ತು ಅಲ್ಲಾದ್ದೀನ್ ಖಿಲ್ಜಿ ಮಧ್ಯೆ ಯುದ್ದ ನಡೆದ ಸ್ಥಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News