ಹೊಸದಿಲ್ಲಿಯ ಆ್ಯಕ್ಸೆಸ್ ಸಂಸ್ಥೆಯ ವಿಶೇಷ ಪ್ರಶಸ್ತಿಗೆ ಡಾ. ವೀರೇಂದ್ರ ಹೆಗ್ಗಡೆ ಆಯ್ಕೆ
Update: 2017-11-29 20:44 IST
ಬೆಳ್ತಂಗಡಿ,ನ.29: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೊಸದಿಲ್ಲಿಯ ಆ್ಯಕ್ಸೆಸ್ (ACCESS) ಸಂಸ್ಥೆಯ ಭಾರತೀಯ ಆರ್ಥಿಕ ಸೇರ್ಪಡೆಯ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕಿ ರಾಧಿಕಾ ಅಗಸ್ತೆ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಸೇರ್ಪಡೆ ಹಾಗೂ ಸಬಲೀಕರಣಕ್ಕಾಗಿ ಡಾ.ಹೆಗ್ಗಡೆಯವರು ನೀಡಿರುವ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಹೊಸದಿಲ್ಲಿಯಲ್ಲಿ ಡಿ. 11 ರಂದು ನಡೆಯಲಿದೆ ಎಂದವರು ತಿಳಿಸಿದ್ದಾರೆ.