ಕಾರ್ಕಳ: ಮನೆಗೆ ನುಗ್ಗಿ ಕಳವು

Update: 2017-12-01 16:14 GMT

ಕಾರ್ಕಳ, ಡಿ.1: ಮನೆಗೆ ಬೀಗ ಹಾಕಿ ಮನೆಯವರೆಲ್ಲಾ  ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋದ ಘಟನೆ ತಾಲೂಕಿನ ಮುಂಡ್ಕೂರು ಹೊಸಮನೆ ಎಂಬಲ್ಲಿಂದ ವರದಿಯಾಗಿದೆ.

  ಮುಂಡ್ಕೂರು ಅಂಗಡಿಗುತ್ತು ಹೊಸಮನೆಯ ಜಯ ಎನ್.ಶೆಟ್ಟಿ ಎಂಬವರು ಗುರುವಾರ ಬೆಳಗ್ಗೆ 11ಗಂಟೆಗೆ ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ಕಿನ್ನಿಗೋಳಿಗೆ ಮದುವೆಗೆ ಹೋಗಿದ್ದು ಅಪರಾಹ್ನ 2 ಗಂಟೆಗೆ ಮರಳಿ ಬಂದಾಗ ಕಳವು ನಡೆದಿರುವುದು ಗೊತ್ತಾಯಿತು.

ಕಳ್ಳರು ಮನೆಯ ಛಾವಡಿಯಲ್ಲಿ ಕಬ್ಬಿಣದ ಕಪಾಟಿನ ಒಳಗೆ ಇರಿಸಿದ್ದ  ಕರಿಮಣಿ ಸರ, ಸ್ಕ್ರೂ ಇರುವ ಬಂಗಾರದ ಬಳೆ ಹಾಗೂ ಕಿವಿಗೆ ಧರಿಸುವ ಬಂಗಾರದ 2 ಗುಂಡುಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News