ಮರಿಕ್ಕಳದಲ್ಲಿ ಮೀಲಾದುನ್ನಬಿ

Update: 2017-12-01 16:50 GMT

ಮೊಂಟೆಪದವು, ಡಿ. 1: ಮಹದನುಲ್ ಮದರಸ ಮರಿಕ್ಕಳ ಮೊಂಟೆಪದವು ವತಿಯಿಂದ ಮೀಲಾದುನ್ನಬಿ ರ್ಯಾಲಿಯು ಶೈಖುನಾ ಖಾಝಿ ಬೇಕಲ್ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಲ್ ಧ್ವಜಾರೋಹಣ ನೆರವೇರಿಸಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು ರವರು ಖತೀಬ್ ಉಸ್ತಾದ್ ಅಬ್ಬಾಸ್ ಸಖಾಫಿ ಮಡಿಕೇರಿರವರಿಗೆ ಧ್ವಜ ಹಸ್ತಾಂತರಿಸುವುದರ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ, ಮುಅಲ್ಲಿಮ್ ರಮಾಳಾನ್ ಮದನಿ ಕಂಬ್ಲಬೆಟ್ಟು, ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಜಮಾಅತ್ ಕೋಶಾಧಿಕಾರಿ ಹನೀಫ್ ಚಂದಹಿತ್ತಿಲು, ಎಸ್.ವೈ.ಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಅಲೀಕುಂಞಿ ಅಗಲ್ತಬೆಟ್ಟು, ಪ್ರಧಾನ ಕಾರ್ಯದರ್ಶಿ ಎಮ್ ಎಚ್ ಹಮೀದ್ ಮಜಲು, ಎಸ್ಸೆಸ್ಸೆಫ್ ಮರಿಕ್ಕಳ ಯುನಿಟ್ ಪ್ರಧಾನ ಕಾರ್ಯದರ್ಶಿ ಅಝರ್ ಅಗಲ್ತಬೆಟ್ಟು, ಜಲೀಲ್ ಮೋಂಟುಗೋಳಿ, ಅಬ್ಬಾಸ್ ನಿಡ್ಮಾಡ್, ಹಮೀದ್ ಹಾಜಿ ಜಂದಹಿತ್ತಿಲು, ಕೆ.ಸಿ.ಎಫ್ ಸದಸ್ಯರಾದ ಆಸಿಫ್ ಕೆಂಪುಗುಡ್ಡೆ, ಇಕ್ಬಾಲ್ ಕಲ್ಕಟ್, ಇಝುದ್ದೀನ್ ಕೆಂಪುಗುಡ್ಡೆ, ಅಬ್ದುಲ್ ಖಾದರ್ ಕಟ್ಟಪುಣಿ ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News