ಉಡುಪಿ: ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ
ಉಡುಪಿ, ಡಿ.2: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರ ಕಾಡು ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾದ 2017-18ನೆ ಸಾಲಿನ ಮೂರು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಶನಿವಾರ ಸಮಾಪ್ತಿಗೊಂಡಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಮುಖ್ಯ ಅತಿಥಿ ಯಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿದರು.
ವಿವಿಧ ಸ್ಪರ್ಧೆಗಳ ಫಲಿತಾಂಶದ ವಿವರ ಈ ರೀತಿ ಇದೆ
ಜಾನಪದ ನೃತ್ಯ: ಪ್ರ- ಮಲ್ಪೆ ಸರಸ್ವತಿ ಯುವಕ ಮಂಡಲ(ಉಡುಪಿ ಜಿಲ್ಲೆ), ದ್ವಿ- ಹಾನಬಾಳು ಕಲಾ ಸೂರ್ಯ ಯುವಕ ಸಂಘ(ಹಾಸನ), ತೃ- ಕಿಲಾರ ಕೆವಿಎಸ್ಎಸ್ ಕಲಾ ಬಳಗ(ಮಂಡ್ಯ). ಜಾನಪದ ಹಾಡು: ಪ್ರ- ಮಾತೃಭೂಮಿ ಯುವಕ ಸಂಘ(ಬೆಂಗಳೂರು ನಗರ), ದ್ವಿ- ಗುರುಕೃಪಾ ಸಂಗೀತ ಪಾಠಶಾಲೆ (ಶಿವಮೊಗ್ಗ), ತೃ- ಶರೀಫ್ ದೊಡ್ಡಮನಿ ಕಾಳವಾಡ(ಧಾವರಾಡ) ಏಕಾಂಕ ನಾಟಕ: ಪ್ರ-ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜು(ಚಿಕ್ಕಮಗಳೂರು), ದ್ವಿ- ಬೀನಾ ವೈದ್ಯ ಕಾಲೇಜಿನ ತಂಡ(ಉತ್ತರ ಕನ್ನಡ), ತೃ- ನಟವರಿ ಕಲಾ ಪರಿಷತ್(ಗದಗ).
ಹಿಂದೂಸ್ಥಾನಿ: ಪ್ರ- ಸರಸ್ವತಿ ಸಬರದ(ವಿಜಯಪುರ), ದ್ವಿ-ಬವಸರಾಜ ವಂದಳಿ(ರಾಯಚೂರು), ತೃ- ವಿಶ್ವನಾಥ ವಸ್ತ್ರದಮಠ(ಕಲಬುರ್ಗಿ). ಕರ್ನಾಟಕ ಸಂಗೀತ: ಪ್ರ-ಅದಿತಿ ಎನ್.ಪ್ರಹ್ಲಾದ್(ಬೆಂಗಳೂರು ಗ್ರಾಮಾಂತರ), ದ್ವಿ- ಸ್ವಾತಿ ಎನ್.(ಬಳ್ಳಾರಿ), ತೃ-ಅಖಿಲಾ(ದ.ಕ.). ತಬಲಾ: ಪ್ರ- ಸುದರ್ಶನ್ ಅಸಕಿಹಾಳ(ರಾಯಚೂರು), ದ್ವಿ- ಪ್ರಸಾದ್ ಎಂ. (ಧಾರವಾಡ), ತೃ-ಸಂತೋಷ್ ಎಂ.(ದಾವಣಗೆರೆ). ಸಿತಾರ್: ಪ್ರ-ಪ್ರವೀಣ ಹೂಗಾರ(ಧಾರವಾಡ), ದ್ವಿ-ಅರವಿಂದ ಎಸ್.ಕೆ.(ಗದಗ), ತೃ-ಚೈತ್ರಾ ಪತ್ತಾರ (ಬಾಗಲಕೋಟೆ). ಕೊಳಲು: ಪ್ರ- ಮಣಿಕಂಠ ವಿ.ಕುಲಕರ್ಣಿ(ಕಲಬುರ್ಗಿ), ದ್ವಿ- ಕೃತಿಕಾ ವಿ.ಜಂಗಿನಮಠ(ವಿಜಯಪು), ತೃ- ಚೇತನ್ ನಾಯಕ್(ಉಡುಪಿ).
ವೀಣೆ: ಪ್ರ- ಪೃಥ್ವಿ ಬಿ.ಎಂ.(ದಾವಣಗೆರೆ), ದ್ವಿ- ಕೃಷ್ಣ ಕುಮಾರಿ(ಬೆಂಗಳೂರು ಗ್ರಾಮಾಂತರ), ತೃ-ಭುವನಶ್ರೀ(ಬೆಂಗಳೂರು ನಗರ). ಮೃದಂಗ: ಪ್ರ- ದಶರಥಿ(ದಾವಣಗೆರೆ), ದ್ವಿ-ಅಮೋಘ ಕೆ.ಎಂ.(ಬೆಂಗಳೂರು ನಗರ), ತೃ- ಎಸ್.ಎನ್.ಲಕ್ಷ್ಮೀನಾರಾಯಣ(ಚಿಕ್ಕಬಳ್ಳಾಪುರ). ಹಾರ್ಮೋನಿಯಂ: ಪ್ರ- ಗಂಗಾಧರ(ಗದಗ), ದ್ವಿ-ವಿಶ್ವನಾಥ ವಸ್ತ್ರದಮಠ(ಕಲಬುರ್ಗಿ), ತೃ- ಬಸವರಾಜ ಪಲ್ಲೇದ(ಹಾವೇರಿ). ಗಿಟಾರ್: ಪ್ರ-ಕೆವಿನ್(ಚಾಮರಾಜನಗರ), ದ್ವಿ- ದೀಕ್ಷಿತ್ ನೆಲ್ಲಿತಾಮ(ಕೊಡಗು), ತೃ-ಶಿರಾಮ ಭಾಗ್ವತ್(ಉತ್ತರ ಕನ್ನಡ).
ಭರತನಾಟ್ಯ: ಪ್ರ- ಶಮಾ ಪ್ರಣಮ್ಯ(ದ.ಕ.), ದ್ವಿ- ನೂಷಾ ಐತಾಳ್ (ಶಿವಮೊಗ್ಗ), ತೃ- ಅನಘಶ್ರೀ(ಉಡುಪಿ). ಒಡಿಸ್ಸಿ: ಪ್ರ- ಅಮೃತಾ (ಮೈಸೂರು), ದ್ವಿ- ದೀಪಿಕಾ(ಗದಗ), ತೃ- ಮಮತಾ ಶೆಣೈ(ಕೊಡಗು). ಮಣಿಪುರಿ: ಪ್ರ- ನಿಕಿತಾ ಯೋಗೇಶ್(ಕೊಡಗು), ದ್ವಿ- ಕೌಸ್ತುಭ(ಮಂಡ್ಯ), ತೃ- ಮಶಾಕಾ ಅಹಮದ್(ಕಲಬುರ್ಗಿ). ಕಥಕ್: ಪ್ರ- ಸಪ್ನಾ ಕಾಮತ್(ಉಡುಪಿ), ದ್ವಿ- ಶ್ವೇತಾ ಸಂಡೂರು(ಗದಗ), ತೃ- ಗಾನವಿ ರಮೇಶ್(ಕೊಡಗು). ಕೂಚುಪುಡಿ: ಪ್ರ- ಪಿ.ರಂಜನಾ(ಬಳ್ಳಾರಿ), ದ್ವಿ- ಅಂಕಿತಾ ರಾವ್(ಧಾರವಾಡ), ತೃ- ಕಾರ್ತಿಕ್ ಶೆಣೈ(ಕೊಡಗು). ಆಶು ಭಾಷಣ: ಪ್ರ- ಕಾರ್ತಿಕ್ ಎಚ್.ಎನ್.(ಬೆಂಗಳೂರು ನಗರ), ದ್ವಿ- ಲೋಕೇಶ್ ಬಾಬುಲಾಲ್(ರಾಯಚೂರು), ತೃ- ವಿರಾಜ(ರಾಮನಗರ).
ವೇದಿಕೆಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಅಭಿಜಿನ್ ಶೆಟ್ಟಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಪ ನಿರ್ದೇಶಕ ರಂಗಯ್ಯ, ಅಜ್ಜರಕಾಡು ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪೆ್ರೂ.ಜಗದೀಶ್ ರಾವ್ ಉಪಸ್ಥಿತರಿದ್ದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು.