ಕೊಲ್ಲರಕೋಡಿ: ಮೀಲಾದುನ್ನಬಿ ಆಚರಣೆ

Update: 2017-12-03 14:27 GMT

ಕೊಲ್ಲರಕೋಡಿ, ಡಿ.3:  ನೂರುಲ್ ಉಲೂಂ ಮದರಸ ಕೊಲ್ಲರಕೋಡಿ ಇದರ ವತಿಯಿಂದ ಮೀಲಾದುನ್ನಬಿ ಸಂಭ್ರಮದಿಂದ ಆಚರಿಸಲಾಯಿತು.

ಝಕರಿಯಾ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಬ್ರಾಹಿಂ ಅಹ್ಸನಿ ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದ್ ತಖ್ವಾ ಅಧ್ಯಕ್ಷ ರಝಾಕ್ ಪಾರೆ ವಹಿಸಿದ್ದರು. ನಂತರ ಮಂಜನಾಡಿ ಮಸೀದಿ ಮುದರಿಸ್ ಅಹ್ಮದ್ ಬಾಕವಿ ಮುಖ್ಯ ಪ್ರಭಾಷನಗೈದರು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಹಿತು.

ಈ ಸಂದರ್ಭ ಆಲಿ ಕುಂಞಿ ಪಾರೆ, ಎನ್.ಎಮ್. ಅಬ್ದುಲ್ ರಹ್ಮಾನ್ ಹಾಜಿ, ಇಬ್ರಾಹಿಂ ಹಾಜಿ ಪಾರೆ, ಮೂಸ ಹಾಜಿ, ಹಮೀದ್ ತಟ್ಲ, ಬಶೀರ್ ಎನ್. ಎಮ್., ಮುಹಮ್ಮದ್ ಎನ್.ಐ, ಖಾದರ್ ಚೌಕ, ಸಾಬಿತ್ ಪಾರೆ, ಮದರಸ ಅಧ್ಯಾಪಕರಾದ ಅಬ್ಬಾಸ್ ಸಖಾಫಿ ಬೊಳ್ಮಾರ್, ಉಮರ್ ಮದನಿ ಪರಪ್ಪು ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News