'2018ರ ಮಾರ್ಚ್ ಒಳಗೆ ರಾ.ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣ'
ಮಣಿಪಾಲ, ಡಿ. 8: ಮುಂದಿನ ವರ್ಷದ ಮಾರ್ಚ್ ತಿಂಗಳ ಕೊನೆಯೊಳಗೆ ಉಡುಪಿ ಜಿಲ್ಲೆಯ ಸುರತ್ಕಲ್ನಿಂದ ಕುಂದಾಪುರದವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು ಸಂಪೂರ್ಣ ಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ವಿಜಯಕುಮಾರ್ ಸ್ಯಾಮ್ಸನ್, ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ‘ದಿಶಾ’ ಸಭೆಗೆ ಆಶ್ವಾಸನೆ ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಇಲಾಖೆ ಅಧಿಕಾರಿಯಿಂದ ಈ ಭರವಸೆ ವ್ಯಕ್ತವಾಯಿತು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಾಂಗಣದಲ್ಲಿಸಂಸದರಅ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸೆಯಲ್ಲಿಇಲಾಖೆಅಧಿಕಾರಿಯಿಂದಈರವಸೆ ವ್ಯಕ್ತವಾಯಿತು. ಸುರತ್ಕಲ್ನಿಂದ ಕುಂದಾಪುರದವರೆಗಿನ 90ಕಿ.ಮೀ ಉದ್ದದ ರಾ.ಹೆದ್ದಾರಿ ಚತುಷ್ಪಥ ಕಾಮಗಾರಿಯಲ್ಲಿ ಈಗಾಗಲೇ 82 ಕಿ.ಮೀ.ಕಾಮಗಾರಿ ಸಂಪೂರ್ಣ ವಾಗಿ ಮುಗಿದಿದೆ. ಉಳಿದಿರುವ 8 ಕಿ.ಮೀ. ರಸ್ತೆ ಕಾಮಗಾರಿಯನ್ನು ಮಾರ್ಚ್ ತಿಂಗಳೊಳಗೆ ಮುಕ್ತಾಯಗೊಳಿಸಲಾಗುವುದು. ಹೆದ್ದಾರಿಯ ಎರಡೂ ಬದಿಗಳಲ್ಲಿ ಒಟ್ಟು 42 ಕಿ.ಮೀ. ಉದ್ದದ ಸರ್ವಿಸ್ ರಸ್ತೆಯಲ್ಲಿ ಈಗಾಗಲೇ 38 ಕಿ.ಮೀ. ರಸ್ತೆ ನಿರ್ಮಾಣಗೊಂಡಿದೆ. ಇನ್ನೂ ವಿವಿದೆಡೆಗಳಲ್ಲಿ 12 ಕಿ.ಮೀ. ಹೆಚ್ಚುವರಿ ಸರ್ವಿಸ್ ರಸ್ತೆಯನ್ನು ಸಾರ್ವಜನಿಕರು ಕೇಳಿದ್ದಾರೆ. ಉದ್ಯಾವರದ 2.7ಕಿ.ಮೀ. ಹಾಗೂ ಉಚ್ಚಿಲದ ಹೆಚ್ಚುವರಿ ಸರ್ವಿಸ್ ರಸ್ತೆ ಸೇರಿದಂತೆ ಎಲ್ಲವೂ ಮಾರ್ಚ್ ಒಳಗೆ ಮುಗಿಯಲಿದೆ ಎಂದು ಸ್ಯಾಮ್ಸನ್ ತಿಳಿಸಿದರು.
ಮೂರುಕೈಗೆ ಪ್ಲೈಓವರ್: ಕಳೆದ ಏಳೆಂಟು ವರ್ಷಗಳಿಂದ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಕುಂಟುತ್ತಾ ಸಾಗಿರುವ ಕುಂದಾಪುರ ಶಾಸ್ತ್ರಿ ಸರ್ಕಲ್ನ ಪ್ಲೈಓವರ್ ಕಾಮಗಾರಿಯೂ ಮಾರ್ಚ್ನಲ್ಲಿ ಮುಗಿಯಲಿದೆ. ಇದಕ್ಕಾಗಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ನುಡಿದರು. ಇನ್ನು ಬಸ್ರೂರು ಮೂರುಕೈಯಲ್ಲಿ ಜನರ ಬೇಡಿಕೆಯಂತೆ ಪ್ಲೈಓವರ್ಗೆ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅಲ್ಲಿಂದ ಅನುಮತಿ ಸಿಕ್ಕಾಕ್ಷಣ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ಪಡುಬಿದ್ರಿ, ಉಚ್ಚಿಲ, ಕುಂದಾಪುರಗಳಲ್ಲಿ ಕಾಮಗಾರಿಯ ಕಾರಣದಿಂದ ಅಪಘಾತಗಳು ಸಂಭವಿಸುತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೀಡಿದ ಸಲಹೆಗೆ ವಿಜಯಕುಮಾರ್ ಒಪ್ಪಿಗೆ ಸೂಚಿಸಿದರು.
ಕುಂದಾಪುರ-ಶೀರೂರು: ಕುಂದಾಪುರದಿಂದ ಶೀರೂರುವರೆಗಿನ ಚತುಷ್ಪಥ ಕಾಮಗಾರಿಯಲ್ಲಿನ ಸಮಸ್ಯೆಯ ಕುರಿತೂ ಚರ್ಚೆ ನಡೆಯಿತು. ಈ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಸುವ ಕೆಲವು ಸ್ಥಳಗಳಲ್ಲಿ ಪೊಲೀಸ್ ರಕ್ಷಣೆ ನೀಡುವಂತೆ ತಿಳಿಸಿದ ಹೆದ್ದಾರಿ ಅಧಿಕಾರಿಗಳ ಕೋರಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ , ಯಾವ ನಿರ್ದಿಷ್ಟ ದಿನಾಂಕ ಮತ್ತು ಸ್ಥಳದಲ್ಲಿ ರಕ್ಷಣೆ ಅಗತ್ಯವಿದೆ ಎಂಬ ಕೋರಿಕೆಯನ್ನು ಲಿಖಿತವಾಗಿ ನೀಡಿದರೆ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದರು. ಅದೇ ರೀತಿ ಹೆದ್ದಾರಿಯ ಡಿವೈಡರ್ಗಳ ಮೇಲೆ ಬೆಳೆದಿರುವ ಗಿಡಗಳನ್ನು ಸೂಕ್ತ ರೀತಿಯಲ್ಲಿ ಕತ್ತಿರಿಸುವಂತೆ ಅವರು ಸೂಚಿಸಿದರು.
ಮಲ್ಪೆ-ತೀರ್ಥಹಳ್ಳಿ: ಮಲ್ಪೆ- ಉಡುಪಿ-ಮಣಿಪಾಲ-ಪರ್ಕಳ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನಾಲ್ಕು ಹಂತದಲ್ಲಿ ಡಿಪಿಆರ್ ಸಿದ್ಧವಾಗಿದ್ದು, ಈಗ ತೀರ್ಥಹಳ್ಳಿ-ಕಮ್ಮರಡಿ ನಡುವಿನ 15 ಕಿ.ಮೀ.ಗೆ 100 ಕೋಟಿ ರೂ. ಹಾಗೂ ಮಲ್ಪೆ-ಪರ್ಕಳ ನಡುವೆ 110 ಕೋಟಿ ರೂ.ಗಳ ಕಾಮಗಾರಿ ಮೊದಲ ಹಂತದಲ್ಲಿ ನಡೆಯಲಿದೆ. 210 ಕೋಟಿ ರೂ.ಗಳ ಈ ಡಿಪಿಆರ್ಗೆ ಮಂಜೂ ರಾತಿ ದೊರೆತಿದೆ ಎಂದರು.
ಕೇಂದ್ರ ರಸ್ತೆ ನಿಧಿಯಲ್ಲಿ ಒಟ್ಟು 36 ರಸ್ತೆಗಳಲ್ಲಿ 20ಕ್ಕೆ ಹಂತ ಹಂತವಾಗಿ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ ಒಟ್ಟು 209 ಕೋಟಿ ರೂ.ಗಳಲ್ಲಿ 118 ಕೋಟಿ ರೂ. ಮಂಜೂರಾಗಿದೆ. ಉಳಿದವುಗಳಿಗೆ ಈ ತಿಂಗಳ ಕೊನೆಯೊಳಗೆ ಟೆಂಡರ್ ಆಗಲಿದೆ ಎಂದರು.
ಬ್ಯಾಂಕುಗಳಿಗೆ ಸೂಚನೆ: ಜಿಲ್ಲೆಯಲ್ಲಿ ನಗದು ರಹಿತ ವಹಿವಾಟನ್ನು ಉತ್ತೇಜಿಸುವ ಕುರಿತಂತೆ ಜಿಲ್ಲೆಯ 9 ಬ್ಯಾಂಕ್ಗಳು ತಲಾ 10 ಗ್ರಾಮಗಳನ್ನು ದತ್ತು ಪಡೆದಿದ್ದು, ಈ ಗ್ರಾಮಗಳಲ್ಲಿ ಇದುವರೆವಿಗೂ ನಗದು ರಹಿತ ವ್ಯವಹಾರ ಆರಂಭಗೊಳ್ಳದ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ರನ್ನು ಸಂಸದೆ ಪ್ರಶ್ನಿಸಿದರು. ನಗದು ರಹಿತ ವ್ಯವಹಾರ ಮಾಡಲು ಹೊಸ ಅಪ್ಲಿಕೇಷನ್ ಸಿದ್ದ ಪಡಿಸಿದ್ದು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್ ಬೋರ್ಗಿಯಾ ತಿಳಿಸಿದರು. 20ರೊಳಗೆ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಸಂಸದರು, ದತ್ತು ಪಡೆದ ಗ್ರಾಮಗಳಲ್ಲಿ ಡಿಜಿಟಲ್ ವ್ಯವಹಾರ ನಿರ್ವಹಿಸಲು ಅಸಕ್ತಿ ವಹಿಸದ ಬ್ಯಾಂಕ್ಗಳಿಗೆ ನೀಡಿರುವ ಗ್ರಾಮಗಳನ್ನು, ಸಿಂಡಿಕೇಟ್ ಬ್ಯಾಂಕ್ ದತ್ತು ಸ್ವೀಕರಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ, 13626 ಮಂದಿ ನಿವೇಶನ ರಹಿತರು ಇದ್ದು, 8872 ಮಂದಿ ಮನೆ ರಹಿತರು ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಸತಿ ಯೋಜನೆಗಳ ಗುರಿಯನ್ನು ಪೂರ್ಣಗೊಳಿಸುವಂತೆ ಶೋಭಾ ಸೂಚಿಸಿದರು. ಹೊಸ ರೇಷನ್ ಕಾರ್ಡ್ಗಾಗಿ 8112 ಅರ್ಜಿ ಸ್ವೀಕರಿಸಿದ್ದು, 6932 ಕಾರ್ಡ್ ಗಳು ಈಗಾಗಲೇ ಪ್ರಿಂಟ್ ಆಗಿ ಅಂಚೆ ಮೂಲಕ ಫಲಾನುಭವಿಗಳಿಗೆ ನೇರವಾಗಿ ತಲುಪಲಿವೆ. ಉಳಿದ ಅರ್ಜಿಗಳನ್ನು ಶೀಘ್ರವೇ ವಿಲೇ ಮಾಡಲಾ ಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿ ತಿಳಿಸಿದರು.
ಮಾತೃಪೂರ್ಣ ಯೋಜನೆ: ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ 7500 ಗರ್ಭಿಣಿಯರು ಮತ್ತು 7500 ಬಾಣಂತಿಯರು ಸೇರಿದಂತೆ ಒಟ್ಟು 15000 ಮಂದಿಯನ್ನು ಗುರುತಿಸಲಾಗಿದ್ದು, ಕಳೆದ ಅಕ್ಟೋಬರ್ ತಿಂಗಳಲ್ಲಿ 890 ಗರ್ಭಿಣಿಯರು ಮತ್ತು 658 ಬಾಣಂತಿಯರು ಯೋಜನೆಯ ಪ್ರಯೋಜನ ಪಡೆದಿದ್ದು, ನವೆಂಬರ್ನಲ್ಲಿ 1642ಗರ್ಭಿಣಿಯರು ಮತ್ತು 1393 ಬಾಣಂತಿಯರು ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನ ವಿಫಲವಾಗಿದ್ದು, ಜಿಲ್ಲೆಯ ಭೌಗೋಳಿಕ ವ್ಯವಸ್ಥೆ ಹಾಗೂ ಇಲ್ಲಿನ ಜನರ ಮನೋಭಾವವನ್ನು ಅರಿಯದೇ ಯೋಜನೆ ರೂಪಿಸಲಾಗಿದೆ ಎಂದು ಸಂದರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸಿಇಓ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.