ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಮಣಿಪಾಲ ಪೊಲೀಸರು
Update: 2017-12-09 16:55 GMT
ಉಡುಪಿ, ಡಿ.9: ಇಂದ್ರಾಳಿಯ ರೈಲ್ವೆ ನಿಲ್ದಾಣ ಸನಿಹ ಆತ್ಮಹತ್ಯೆಗೆ ಯತ್ನಿಸಿದ ಅಪರಿಚಿತ ಯುವಕನನ್ನು ಸ್ಥಳಿಯರ ಮಾಹಿತಿ ಮೆರೆಗೆ, ಮಣಿಪಾಲ ಪೊಲೀಸರು ರಕ್ಷಿಸಿದ ಘಟನೆ ಶನಿವಾರ ರಾತ್ರೆ 8 ಗಂಟೆಯ ಸುಮಾರಿಗೆ ನಡೆದಿದೆ.
ಯುವಕನು ಮಾನಸಿಕವಾಗಿ ನೊಂದು ಮದ್ಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಶಂಕಿಸಲಾಗಿದೆ.
ಯುವಕನನ್ನು ಪೊಲೀಸರ ಉಪಸ್ಥಿತಿಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಯುವಕ ತನ್ನ ಹೆಸರು ಯಮುನಪ್ಪ (35) ಕುಷ್ಟಗಿ ತಾಲೂಕಿನವನೆಂದು ಹೇಳಿ ಕೊಂಡಿದ್ದಾನೆ. ವಾರಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸುವಂತೆ ಮಣಿಪಾಲ ಠಾಣೆಯ ಪ್ರಕಟಣೆ ತಿಳಿಸಿದೆ.