ಅಂಬೇಡ್ಕರ್ ಸೋದರಳಿಯನ ಮಗ ಅಶೋಕ್ ಅಂಬೇಡ್ಕರ್ ನಿಧನ

Update: 2017-12-09 17:14 GMT

ಮುಂಬೈ, ಡಿ.9: ಭಾರತದ ಸಂವಿಧಾನಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಸೋದರಳಿಯ ಮುಕುಂದ್‌ರಾವ್ ಅವರ ಮಗ ಅಶೋಕ್ ಅಂಬೇಡ್ಕರ್ ಅಲ್ಪಕಾಲದ ಅಸೌಖ್ಯದ ಬಳಿಕ ಮುಂಬೈಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಭಾರತೀಯ ಬೌದ್ಧ ಸಮಾಜದ ಟ್ರಸ್ಟಿಯಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದ ಅಶೋಕ್ ಅಂಬೇಡ್ಕರ್ ದಲಿತರ ಪರವಾದ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅವರ ಏಕೈಕ ಪುತ್ರ ರಾಜರತ್ನ, ಅಂಬೇಡ್ಕರ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂಧೇರಿ ನಿವಾಸಿಯಾಗಿದ್ದ ಅಶೋಕ್ ಅಂಬೇಡ್ಕರ್ ಅಂತ್ಯಕ್ರಿಯೆ ದಾದರ್ ಪಶ್ಚಿಮದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಶೋಕ್ ನಿಧನಕ್ಕೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ತೀವ್ರ ಶೋಕ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News