ಶೂಟೌಟ್ ಮಾಡಿಸಿದ್ದು ನಾನೇ ಎಂದು ಭೂಗತ ಪಾತಕಿ ಕಲಿ ಯೋಗೀಶ

Update: 2017-12-09 17:26 GMT

ಮಂಗಳೂರು, ಡಿ.9: ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸಾರೀಸ್ ವಸ್ತ್ರ ಮಳಿಗೆಯಲ್ಲಿ ಸಿಬ್ಬಂದಿ ಮೇಲೆ ಶುಕ್ರವಾರ ಶೂಟೌಟ್ ಮಾಡಿಸಿದ್ದು ನಾನೇ ಎಂದು ಭೂಗತ ಪಾತಕಿ ಕಲಿ ಯೋಗೀಶ ಖಾಸಗಿ ಸುದ್ದಿವಾಹಿನಿ ಹಾಗೂ ಪತ್ರಿಕೆಯೊಂದಕ್ಕೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ನಾನು ಅಂಗಡಿ ಮಾಲಕರಿಗೆ ಎರಡು ವರ್ಷಗಳಿಂದ ಐದು ಕೋಟಿ ರೂ. ನೀಡುವಂತೆ ತಾಕೀತು ಮಾಡುತ್ತಿದ್ದೆ. ಆದರೆ ಅಂಗಡಿಯ ಮಾಲಕ ನನ್ನ ಮಾತನ್ನು ನಿರ್ಲಕ್ಷಿಸಿದ್ದ. ಇದೇ ಕಾರಣಕ್ಕಾಗಿ ನಾನು ಶೂಟೌಟ್ ನಡೆಸಿದ್ದೇನೆ. ಕಳೆದ ವಾರ ಕಿನ್ನಿಮೂಲ್ಕಿಯ ರಾಜಶ್ರೀ ಜ್ಯುವೆಲ್ಲರಿಗೆ ಜೀವಂತ ಗುಂಡು ಕಳುಹಿಸುವ ಮೂಲಕ ಬೆದರಿಕೆ ಹುಟ್ಟಿಸಿದ್ದೆ ಎಂದು ಆತ ತಿಳಿಸಿರುವುದಾಗಿ ತಿಳಿದು ಬಂದಿದೆ.

ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸಾರೀಸ್ ವಸ್ತ್ರ ಮಳಿಗೆಯಲ್ಲಿ ಶುಕ್ರವಾರ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಮಳಿಗೆಯ ಸೇಲ್ಸ್‌ ಮ್ಯಾನ್ ಮಹಾಲಿಂಗ ನಾಯ್ಕ (40) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News