ಉತ್ತರ ಪ್ರದೇಶ: ಕ್ಯಾನ್ಸರ್ ಪೀಡಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2017-12-10 16:56 GMT

ಲಕ್ನೋ, ಡಿ.10: ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 15 ವರ್ಷದ ಬಾಲಕಿಯೊಬ್ಬಳನ್ನು ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ಇಲ್ಲಿನ ಸರೋಜಿನಿನಗರದಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ಬಾಲಕಿ ದಾರಿಹೋಕನೊಬ್ಬನಲ್ಲಿ ಸಹಾಯ ಯಾಚಿಸಿದ್ದು, ಆತನೂ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಆತನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ.  9 ಗಂಟೆಯ ಸುಮಾರಿಗೆ ಬಾಲಕಿ ತನ್ನ ಪರಿಚಯದ ಯುವಕ ಕರೆದದ್ದಕ್ಕಾಗಿ ಮನೆಯಿಂದ ಹೊರಗಡೆ ತೆರಳಿದ್ದಳು. ಯಾರೂ ಇಲ್ಲದ ಸ್ಥಳಕ್ಕೆ ಕರೆದೊಯ್ದ ಆತ ತನ್ನ ಗೆಳೆಯನ ಜೊತೆ ಸೇರಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ. ಈ ಸಂದರ್ಭ ಬಾಲಕಿ ದಾರಿಹೋಕನೊಬ್ಬನ ಸಹಾಯ ಯಾಚಿಸಿದ್ದು, ಸಹಾಯ ಮಾಡುವ ನೆಪದಲ್ಲಿ ಬಂದ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಮನೆಗೆ ಬಂದ ಬಾಲಕಿ ಪೋಷಕರೊಡನೆ ಈ ವಿಷಯ ತಿಳಿಸಿದ್ದು, ಬಾಲಕಿಯ ತಂದೆ ಸರೋಜಿನಿನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News