ನನ್ನ ಚಳವಳಿಯಿಂದ ಇನ್ನೊಬ್ಬ ಕೇಜ್ರಿವಾಲ್ ಹುಟ್ಟಲ್ಲ: ಅಣ್ಣಾ ಹಝಾರೆ

Update: 2017-12-13 13:07 GMT

ಹೊಸದಿಲ್ಲಿ, ಡಿ. 13: “ನನ್ನ ಚಳವಳಿಯಿಂದ ಇನ್ನೊಬ್ಬ ಕೇಜ್ರಿವಾಲ್ ಹುಟ್ಟಲ್ಲ” ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಬುಧವಾರ ಹೇಳಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ನ ವರಿಷ್ಠ ಕೇಜ್ರಿವಾಲ್ 2011ರಲ್ಲಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದರು. ಅನಂತರ ಅವರು ಆಪ್ ರಚಿಸಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದರು.

ಆಗ್ರಾದ ಶಾಹಿದ್ ಸ್ಮಾರಕದಲ್ಲಿ ಮಂಗಳವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 23ರಂದು ಬೃಹತ್ ರ್ಯಾಲಿ ಆಯೋಜಿಸಲಾಗುವುದು ಎಂದರು.

ಜನ ಲೋಕಪಾಲ್ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದುರ್ಬಲಗೊಳಿಸಿದರು. ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರ ತಪ್ಪೆಸಗಿದೆ ಎಂದು ಅಣ್ಣಾ ಹಝಾರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News