ಡಿ.16ರಂದು ಸೌಹಾರ್ದ ಸಮಾವೇಶ
Update: 2017-12-14 21:03 IST
ಉಡುಪಿ, ಡಿ.14: ಎಸ್ಐಒ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಹಲವು ಧರ್ಮಗಳು ಒಂದು ಭಾರತ’ ವಾರ್ಷಿಕ ಅಭಿಯಾನದ ಪ್ರಯುಕ್ತ ವಲಯ ಮಟ್ಟದ ಸೌಹಾರ್ದ ಸಮಾವೇಶವನ್ನು ಡಿ.16ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಅಜ್ಜರಕಾಡಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಎಸ್ಐಒ ರಾಷ್ಟ್ರೀಯ ಅಧ್ಯಕ್ಷ ನಹಾಸ್ ಮಾಳ, ಹಿರಿಯ ಚಿಂತಕ ಶಿವಸುಂದರ್, ಪಾಸ್ಟರ್ ಡೇವಿಡ್ ಎಫ್. ನಿರ್ಮಾನಿಕ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಭಾಗವಹಿಸಲಿರುವರು ಎಸ್ಐಒ ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.