ಅಪಘಾತ: ಗಾಯಾಳು ಮೃತ್ಯು
Update: 2017-12-14 22:27 IST
ಕೋಟ, ಡಿ.14: ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಮರದ ಮಿಲ್ ಹತ್ತಿರ 2016ರ ಡಿ. 24ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದ ಕೃಷ್ಣ (31) ಎಂಬವರು ಡಿ.14ರಂದು ಬೆಳಗ್ಗೆ 11:45ರ ಸುಮಾರಿಗೆ ಸಾಲಿಗ್ರಾಮ ಗೆಂಡೆಕೆರೆ ಎಂಬಲ್ಲಿರುವ ಮನೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.