×
Ad

ಉಡುಪಿ: ‘ಸುವ್ಯವಸ್ಥಿತ ಪರ್ಯಾಯ ಆಚರಣೆಗೆ ಜಿಲ್ಲಾಡಳಿತ ನೆರವು’

Update: 2017-12-15 21:58 IST

ಉಡುಪಿ, ಡಿ.15: ನಗರದೊಳಗಿನ ರಸ್ತೆಯ ಹೊಂಡಗುಂಡಿ ಮುಚ್ಚಲು ಉಡುಪಿ ನಗರಸಭೆಗೆ ಒಂದು ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು, ಪರ್ಯಾಯದ ವೇಳೆ ಉಡುಪಿ ನಗರ ಸ್ವಚ್ಛ ಹಾಗೂ ಸೌಂದರ್ಯದಿಂದ ಕಂಗೊಳಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ನಗರಸಭೆ ಪೌರಾಯುಕ್ತರಿಗೆ ಖಡಕ್ ಸೂಚನೆ ನೀಡಿದರು.

ಸಚಿವರ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಫಲಿಮಾರು ಮಠದ ಪರ್ಯಾಯ ಪೂರ್ವಭಾವಿ ಸಭೆ ಯನುದ್ದೇಶಿಸಿ ಅವರು ಮಾತನಾಡಿದರು. ಪರ್ಯಾಯದ ವೇಳೆ ಜಿಲ್ಲಾಡಳಿತ ಒದಗಿಸುವ ನೆರವು ಹಾಗೂ ಪೂರಕ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿದರಲ್ಲದೆ, ಡಿ.30ರೊಳಗೆ ಎಲ್ಲ ರಸ್ತೆಗಳು ಹೊಂಡ ಮುಕ್ತವಾಗಿ ರಬೇಕೆಂದರು.

ಫಲಿಮಾರು ಮಠದ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಮಾತನಾಡಿ, ಈ ಬಾರಿ ಪುರಪ್ರವೇಶ ಹಾಗೂ ಪರ್ಯಾಯ ಮೆರವಣಿಗೆ ಗಳೆರಡೂ ಒಂದೇ ಮಾರ್ಗದಲ್ಲಿ ಸಂಚರಿಸಲಿದ್ದು ಟ್ಯಾಬ್ಲೊ ಸಂಚಾರಕ್ಕೆ ಅನುವು ಮಾಡಿಕೊಡಲು ಮನವಿ ಮಾಡಿದರು. 16 ಫೀಟ್‌ಗಿಂತ ಎತ್ತರದ ಟ್ಯಾಬ್ಲೊಗಳು ಇರದಂತೆ ನೋಡಿಕೊಳ್ಳಿ ಎಂದ ಸಚಿವರು, ಮೆಸ್ಕಾಂ ಮತ್ತು ಬಿಎಸ್‌ಎನ್‌ಎಲ್ ಹಾಗೂ ಕೇಬಲ್ ವಯರ್‌ಗಳನ್ನು ಅಳವಡಿಸಿದವರು ರಸ್ತೆಗಳಲ್ಲಿ ವಯರ್‌ಗಳು ಇದಂತೆ ನೋಡಿಕೊಳ್ಳಬೇಕೆಂದರು.

ಅದೇ ರೀತಿ ರಸ್ತೆಗಳ ತುಂಬಾ ಹೋರ್ಡಿಂಗ್ಸ್, ಬಂಟಿಂಗ್ಸ್ ಹಾಗೂ ಬ್ಯಾನರ್ ಗಳನ್ನು ಯಾರೇ ಹಾಕುವುದಿದ್ದರೂ ಪೊಲೀಸ್ ಮತ್ತು ನಗರಸಭೆಯ ಅನುಮತಿ ಅಗತ್ಯವಾಗಿದ್ದು, ಇಲಾಖೆಗಳು ಅನುಮತಿಯನ್ನು 24 ಗಂಟೆಯೊಳಗಾಗಿ ನೀಡಲು ಸಚಿವರು ಆದೇಶಿಸಿದರು.

ಆರೋಗ್ಯ ಸುರಕ್ಷೆ, ನೀರು ಪೂರೈಕೆ, ವಿದ್ಯುತ್ ವ್ಯತ್ಯಯವಾಗದಂತೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪ್ರವಾಸೋದ್ಯಮ ಇಲಾಖೆ ಪರ್ಯಾಯಕ್ಕೆ ವಿವಿಧೆಡೆಗಳಿಂದ ಆಕರ್ಷಿಸಲು ಕೆಎಸ್‌ಟಿಡಿಸಿ ಯೊಂದಿಗೆ ಸಮನ್ವಯ ಸಾಧಿಸಿ ಟೂರ್ ಪ್ಯಾಕೇಜ್ ರೂಪಿಸುವಂತೆ ಸಲಹೆ ನೀಡಿದರು.

ನಗರಸಭೆ ಶೌಚಾಲಯ ನಿರ್ವಹಣೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕು ಎಂದ ಸಚಿವರು, ಪರ್ಯಾಯ ಸಮಿತಿಗೂ ಹೆಚ್ಚಿನ ಹೊಣೆ ಇದ್ದು, ಸ್ವಚ್ಛತೆ ಅದರಲ್ಲೂ ಮುಖ್ಯವಾಗಿ ಹಸಿಕಸ ನಿರ್ವಹಣೆಗೆ ವಿಶೇಷ ಒತ್ತು ನೀಡುವಂತೆ ತಿಳಿಸಿದರು. ಸಮಾರಂಭಕ್ಕೆ ಆಗಮಿಸುವ ವಿಐಪಿಗಳ ಪಟ್ಟಿಯನ್ನು ಮುಂಚಿತವಾಗಿ ನೀಡಬೇಕೆಂದ ಅವರು, ಹೊರೆಕಾಣಿಕೆ ಬರುವ ಮಾರ್ಗದಲ್ಲೂ ಪೊಲೀಸ್ ಭದ್ರತೆ ನೀಡಬೇಕೆಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು, ವುಠದ ಪ್ರತಿನಿಧಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News