ಸಂಸದ ಸ್ಥಾನದಿಂದ ಶರದ್ ಯಾದವ್ ಅನರ್ಹತೆ: ಮಧ್ಯಂತರ ತಡೆಗೆ ದಿಲ್ಲಿ ಹೈಕೋರ್ಟ್ ನಿರಾಕರಣೆ
Update: 2017-12-15 16:34 GMT
ಹೊಸದಿಲ್ಲಿ, ಡಿ. 15: ರಾಜ್ಯ ಸಭಾ ಸಂಸದ ಸ್ಥಾನದಿಂದ ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಅವರನ್ನು ಅನರ್ಹಗೊಳಿಸಿರುವುದನ್ನು ತಡೆಯಲು ಮಧ್ಯಂತರ ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಆದಾಗ್ಯೂ, ಭತ್ತೆ ಹಾಗೂ ಸವಲತ್ತು ಪಡೆಯಲು ಹಾಗೂ ಬಂಗ್ಲೆ ಉಳಿಸಿಕೊಳ್ಳಲು ನ್ಯಾಯಮೂರ್ತಿ ವಿಭು ಬಖ್ರು ಅವಕಾಶ ನೀಡಿದ್ದಾರೆ. ಆದರೆ, ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರ್ಬಂಧಿಸಿದ್ದಾರೆ.
ಶರದ್ ಯಾದವ್ ಮನವಿ ಕುರಿತಂತೆ ಮೇಲ್ಮನೆಯ ಜೆಡಿಯು ನಾಯಕ ರಾಮಚಂದ್ರ ಪ್ರಸಾದ್ ಸಿಂಗ್ ಅವರನ್ನಲ್ಲದೆ ರಾಜ್ಯ ಸಭಾ ಅಧ್ಯಕ್ಷರ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೋರಿದೆ.
ಮುಖ್ಯ ದೂರಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವರ್ಷ ಮಾರ್ಚ್ 1ಕ್ಕೆ ನಿಗದಿಗೊಳಿಸಿದೆ.