ಜಿಗ್ನೇಶ್ ಗೆಲುವು: ಕುಂದಾಪುರದಲ್ಲಿ ಸಂಭ್ರಮಾಚರಣೆ

Update: 2017-12-18 17:22 GMT

ಕುಂದಾಪುರ, ಡಿ.18: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಜಿಗ್ನೇಶ್ ಮೇವಾನಿ ಗೆಲುವಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ವತಿಯಿಂದ ಸೋಮವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಭೀಮ ಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ನೇತೃತ್ವ ದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭ ದಲಿತ ಮುಖಂಡರಾದ ವಿಜಯ್ ಕೆ.ಎಸ್., ಚಂದ್ರಮ ತಲ್ಲೂರು, ಗೊಪಾಲ್ ವಿ., ವಿಠಲ್, ಬಾಬು ಉಳ್ಳೂರು, ಶಂಕರ್, ಹರೀಶ್ ಹೊಸಾಡು, ತಿಲಕ್ ರಾಜ್, ಸುಂದರ, ಸುಕೇಶ, ಪ್ರತಾಪ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News