ಕೊಲ್ಲರಕೋಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿಹಬ್ಬ

Update: 2017-12-19 11:02 GMT

ನರಿಂಗಾನ, ಡಿ.18: ಕೊಲ್ಲರಕೋಡಿ ಶಾಲಾ ಪರಿಸರದ ಹಿರಿಯರ ಬಹುದೊಡ್ಡ ಕನಸಾಗಿದ್ದ ಪ್ರೌಢಶಾಲೆ ಈಗಾಗಲೇ ಆರಂಭವಾಗಿದ್ದು ಆ ಮೂಲಕ ಐದಾರು ಕಿ. ಮೀ. ನಡೆದು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಈಗಿನ ವಿದ್ಯಾರ್ಥಿಗಳಿಗೆ ಇಲ್ಲ. ಶಿಕ್ಷಣವೇ ಬದುಕಿನ ಶಕ್ತಿಯಾಗಿದ್ದು, ಬಡತನ ನಿವಾರಣೆ ಸ್ವಾಭಿಮಾನದ ಬದುಕು ಬಾಳಬೇಕಾದರೆ ಶೈಕ್ಷಣಿಕವಾಗಿ ಬೆಳೆದರೆ ಮಾತ್ರ ಸಾಧ್ಯ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. 

ಕೊಲ್ಲರಕೋಡಿ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಸಮಾರೋಪ ಪ್ರಯುಕ್ತ ರವಿವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಪ್ರೇಮ ಬಾಯಿಯಲ್ಲಿ ಹೇಳಿದರೆ ಸಾಲದು. ದೇಶದ ಬಗ್ಗೆ ಕಿಂಚಿತ್ತು ಪ್ರೇಮ ಇದ್ದರೆ ನಾವು ಆಡುವ ಮಾತು, ನಾವು ಮಾಡುವ ಕೆಲಸ ಎಲ್ಲವೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಲಿ ಹೊರತು ಮಾರಕವಾಗದಿರಲಿ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳು ನಮ್ಮ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಹುಟ್ಟಿಸುವ ಕೆಲಸ ಮಾಡಬೇಕು. ಅದು ಮುಗ್ಧರ ಮಾನಹರಣಕ್ಕೆ ಕಾರಣ ವಾಗಬಾರದು. ನಾನು ಶಾಸಕ‌, ಸಚಿವನಾಗಿ ರಾಜ್ಯ ಮಟ್ಟಕ್ಕೆ ಸೀಮಿತವಾಗಿದ್ದೆ. ಆದರೆ ಕೆಲವು ಸಂಘಟನೆಗಳ ಸದಸ್ಯರು ಸಾಮಾಜಿಕ‌ ಜಾಲತಾಣಗಳಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಾ, ಟಿಪ್ಪಣಿ ಬರೆಯುತ್ತಾ ಇಡೀ ಪ್ರಪಂಚಕ್ಕೆ ಯು.ಟಿ. ಖಾದರ್ ಅನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ನನಗೆ ಬೇಸರವಿಲ್ಲ ಆದರೆ ವಾಸ್ತವ ಏನೆಂದು ಅವರಿಗೂ ಗೊತ್ತು ಎಂದರು.

ಪ್ರತಿ ಗ್ರಾಮದಲ್ಲೂ ಊರಿನ ಸಮಸ್ಯೆ ಪರಿಹರಿಸುತ್ತಾ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಸಂಘ ಸಂಸ್ಥೆಗಳ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಸಿದ್ದಿಕ್ ಪಾರೆ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಯೆನೆಪೊಯ ಸಂಸ್ಥೆಯ ನಿರ್ದೇಶಕ ಜಾವೇದ್ ಯೆನೆಪೊಯ,  ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ  ಟಿ.ಜಿ. ರಾಜಾರಾಮ್ ಭಟ್, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ,  ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಅಬ್ದುಲ್ ಖಾದರ್ ಚೌಕ, ಸುಜಾತಾ,  ಫಯಾಝ್ ಮೊಂಟೆಪದವು, ಲತೀಫ್ ಕಾಪಿಕಾಡು, ಮುರಳೀಧರ ಶೆಟ್ಟಿ ಮೋರ್ಲ, ನಿಯಾಝ್, ಖಲೀಲ್, ಹರ್ಷದ್ ವರ್ಕಾಡಿ, ಮಂಗಳೂರು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ, ಕಾರ್ಯದರ್ಶಿ ಸಮೀರ್ ಪಜೀರು ಅಶ್ರಫ್ ಮೈಸೂರು, ಗಂಗಾಧರ್, ಬಿಜೆಪಿ ಅಲ್ಪಸಂಖ್ಯಾತ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವಾ, ಯುವ ಕಾಂಗ್ರೆಸ್ ಕಾರ್ಯದರ್ಶಿ ನಾಸಿರ್ ಎಸ್ ಎ, ಉದ್ಯಮಿ ಅನ್ಸಾಫ್, ಜೀವನ್ ರಾಜ್ ಕುತ್ತಾರು,  ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ  ಸಿದ್ದಿಕ್ ಮಂಜೇಶ್ವರ, ಮೊಯ್ದಿನ್ ಶಿಹಾಬ್, ಖಾಸಿಂ ಮುಂಬೈ, ಮೈಕಲ್ ಡಿಸೋಜ, ಪ್ರೇಮಾನಂದ ರೈ ಹಾಗೂ  ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ  ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕೊಲ್ಲರಕೋಡಿ ಶಾಲೆಯಿಂದ ವರ್ಗಾವಣೆಗೊಂಡ ಅಧ್ಯಾಪಕರಾದ ಮಹಮ್ಮದ್ ಐ, ರಾಜೇಶ್ವರಿ, ಕಾತ್ಯಾಯಿನಿ, ಪ್ರಸ್ತುತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಕಿ ಮಮತಾ ಹಾಗು ನಿವೃತ್ತ ಮುಖ್ಯೋಪಾಧ್ಯಾಯ ದಿ. ರಾಮ ಅವರ ಪರವಾಗಿ ಅವರ ಪುತ್ರ ಗುರುವಂದನೆ ಸ್ವೀಕರಿಸಿದರು. ದಿ. ರಾಮ ಅವರಿಗೆ ಈ ಸಂದರ್ಭ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯ ಎಸ್ಪಿ ಶೃತಿ ಎನ್.ಎಸ್. ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ನವಾಝ್ ಬೆಳ್ಳಿಹಬ್ಬದ ಪ್ರಯುಕ್ತ ಕೆದಂಬಾಡಿ-ಮಂಜನಾಡಿ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೆಪೊಯ ಆಸ್ಪತ್ರೆಯ ಸಹಕಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಸಿರುವುದನ್ನು ನೆನಪಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಸ್ವಾಗತಿಸಿ, ಉಪಾಧ್ಯಕ್ಷ ವಿವೇಕಾನಂದ ರೈ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು  ಸ್ಮೈಲ್ ಇವೆಂಟ್ಸ್ ಕಾಸರಗೋಡು ತಂಡದಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News