ಉಡುಪಿ: ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ
Update: 2017-12-26 17:04 IST
ಬೈಂದೂರು, ಡಿ.28: ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡ ಲಾಯಿತು.
ಇಂದು ರೋಟರಿ ಭವನದಲ್ಲಿ ನಡೆದ ಜಿಲ್ಲಾ 6ನೆ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯ ದರ್ಶಿ ಮಂಡಳಿಗೆ ಕೆ.ಶಂಕರ್, ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಮಹಾ ಬಲ ವಡೇರಹೋಬಳಿ, ವೆಂಕಟೇಶ್ ಕೋಣಿ ಆಯ್ಕೆಯಾದರು.