×
Ad

ಡಿ.28ರಿಂದ ಶೈಖುನಾ ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ

Update: 2017-12-27 19:20 IST

ಬಂಟ್ವಾಳ, ಡಿ. 27: ಶೈಖುನಾ ಸುರಿಬೈಲ್ ಉಸ್ತಾದ್ (ನ.ಮ.) ಅವರ 16ನೆ ಆಂಡ್ ನೇರ್ಚೆ ಕಾರ್ಯಕ್ರಮವು ಡಿ.28, 29ರಂದು ಕಲ್ಲಡ್ಕ ಸಮೀಪದ ಸುರಿಬೈಲು-ಅಶ್-ಅರಿಯ್ಯ ನಗರದಲ್ಲಿ ನಡೆಯಲಿದೆ.

ಉಸ್ತಾದ್‌ರ ಮಖ್‌ಬರ ಝಿಯಾರತ್‌ನೊಂದಿಗೆ ಆರಂಭವಾಗುವ ಕಾರ್ಯಕ್ರಮದ ನೇತೃತ್ವವನ್ನು ದಾರುಲ್ ಅಶ್-ಅರಿಯ್ಯ ಅಧ್ಯಕ್ಷ ಶೈಖುನಾ ವಾಲೆಮುಂಡೋವು ಉಸ್ತಾದ್ ವಹಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ಧ್ವಜಾರೋಹಣಗೈಯುವರು.

ಕಾರ್ಯಕ್ರಮದ ಪ್ರಯುಕ್ತ ಡಿ. 28ರಂದು ಬೆಳಗ್ಗೆ ಯೆನೆಪೊಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ತಪಾಸಣಾ ಶಿಬಿರ ನಡೆಯಲಿದೆ. ಬುರ್ದಾ ಮಜ್ಲಿಸ್, ಖತಮುಲ್ ಕುರ್‌ಆನ್, ಜಲಾಲಿಯ್ಯಿ ರಾತೀಬ್, ಸಂದಲ್ ಮೆರವಣಿಗೆ, ಪೂರ್ವ ವಿದ್ಯಾರ್ಥಿ ಸಂಗಮ, ತಾಜುಲ್ ಉಲಮಾ ಮೌಲಿದ್ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಸೈಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಯಾವರ, ಶೈಖುನಾ ಪಿ.ಎ. ಉಸ್ತಾದ್, ಶೈಖುನಾ ಮಂಚಿ ಉಸ್ತಾದ್, ಸೈಯದ್ ಜಲಾಲುದ್ದೀನ್ ಅಲ್-ಹಾದಿ ತಂಙಳ್ ಉಜಿರೆ, ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಸೈಯದ್ ಶಿಹಾಬುದ್ದೀನ್ ಅಲ್-ಮರ್ಶಹೂರ್ ತಲಕ್ಕಿ, ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸೈಯದ್ ಶಿಹಾಬುದ್ದೀನ್ ಅಲ್-ಹೈದ್ರೋಸ್ ತಂಙಳ್ ಕಿಲ್ಲೂರು, ಸೈಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು, ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್‌ಶರ್, ಸೈಯದ್ ಸಾದಾತ್ ತಂಙಳ್ ಗುರುವಾಯನಕೆರೆ, ಸೈಯದ್ ಜಲಾಲುದ್ದೀನ್ ತಂಙಳ್ ಮಳ್‌ಹರ್, ಸೈಯದ್ ಅಲವಿ ತಂಙಳ್ ಕಿನ್ಯ, ಸೈಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಸೈಯದ್ ಉಮರ್ ಜಿಫ್ರಿ ತಂಙಳ್ ಮಲಪ್ಪುರಂ, ಸೈಯದ್ ಶೈಶೇಖ್ ತಂಙಳ್ ತಲಶ್ಶೇರಿ, ಸೈಯದ್ ಖಾಸಿಂ ತಂಙಳ್ ಸಾಲೆತ್ತೂರು, ಸೈಯದ್ ಹಬೀಬುಲ್ಲಾ ತಂಙಳ್ ಕುಪ್ಪೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News