ಆಂಧ್ರದ ಚಿತ್ತೂರು ಬಳಿ ಭೀಕರ ಅಪಘಾತ: ಐದು ಮಂದಿ ಮೃತ್ಯು

Update: 2017-12-28 08:27 GMT

ಚಿತ್ತೂರು, ಡಿ. 28: ಕೆಎಸ್ಸಾರ್ಟಿಸಿ ಬಸ್ ಮತ್ತು ಟಿಟಿ ನಡುವೆ ಢಿಕ್ಕಿ ಢಿಕ್ಕಿ ಸಂಭವಿಸಿ ಐದು ಮಂದಿ ಮೃತಪಟ್ಟ ಘಟನೆ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯದ ಬಳಿ ನಡೆದಿದೆ.

ಬೆಂಗಳೂರಿನಿಂದ ಚಿತ್ತೂರಿಗೆ ಹೊರಟಿದ್ದ ಸಾರಿಗೆ ಬಸ್ ಹಾಗೂ ತಿರುಪತಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಟಿಟಿ ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಮಹಾರಾಷ್ಟ್ರದವರೆಂದು ಗುರುತಿಸಲಾಗಿದ್ದು, ಟೆಂಪೊ ಚಾಲಕ ಕಾಮ್ಮಗಿರಿ 35, ರಾಮದಾಸ್ 64, ಶಾಂಚರಣ್ 56, ರೂಪಾಲಿ 20, ಸಾಲಿಕಮ್ಮರಿ 62 ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಆಂದ್ರಪ್ರದೇಶದ ಕಾರ್ಮಿಕ ಸಚಿವ ಅಮರ ನಾಥ್ ರೆಡ್ಡಿ ಹಾಗೂ ಚಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News