×
Ad

ಉಡುಪಿ: ವಿಲಚೇತನರಿಗೆ ಬಸ್ ಪಾಸ್ ನವೀಕರಣ

Update: 2017-12-28 19:40 IST

ಉಡುಪಿ, ಡಿ.28: ಕರ್ನಾಟಕ ರಾಷ್ಟ್ರೀಯ ರಸ್ತೆ ಸಾರಿಗೆ ಸಂಸ್ಥೆಯು ವಿಕಲ ಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು 2017ನೆ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ದರದಲ್ಲಿ ಬಸ್ ಪಾಸುಗಳ ಅವಧಿಯು ಡಿ.31ಕ್ಕೆ ಮುಕ್ತಾಯಗೊಳ್ಳಲಿದ್ದು, 2018ನೇ ಸಾಲಿಗಾಗಿ ಈ ಪಾಸುಗಳನ್ನು ಜ.1ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುತ್ತದೆ.

ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವ ಉದ್ಧೇಶದಿಂದ 2017ನೆ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆ.28ರವರೆಗೆ ಮಾನ್ಯ ಮಾಡಲಾಗುವುದು. ಮಂಗ ಳೂರು ತಾಲೂಕು ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕಿನ ವಿಕಲಚೇತನರು, ವಿಕಲಚೇತನರ ರಿಯಾಯಿತಿ ದರದ ನವೀಕರಣದ ಪಾಸನ್ನು ಪಡೆದುಕೊಳ್ಳಲು ಈ ವಿಭಾಗಕ್ಕೆ ಬಂದು ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬೇಕು.

ಹೊಸ ನವೀಕರಣದ ವಿಕಲಚೇತನರ ಬಸ್‌ಪಾಸು ಪಡೆದುಕೊಳ್ಳವವರು ಅರ್ಜಿಯೊಂದಿಗೆ ನಗದು ರೂಪದಲ್ಲಿ 660 ರೂ. ಮತ್ತು 3 ಪಾಸ್‌ಪೋರ್ಟ್ ಪೊಟೋಗಳನ್ನು ಸಲ್ಲಿಸಬೇಕು. ವಿಕಲಚೇತನರು ಸರಕಾರಿ ನೌಕರಿಯಲ್ಲಿದ್ದಲ್ಲಿ ಬಸ್ಸು ಪಾಸನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News