ಡಿ.31: ಉಡುಪಿ ತಾಲೂಕು ಮಟ್ಟದ ಗುಡ್ಡೆಗಾಡು ಓಟ

Update: 2017-12-29 17:26 GMT

ಉಡುಪಿ, ಡಿ.29: ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ನವಚೇತನ ಯುವಕ ಮಂಡಲ/ಯುವತಿ ಮಂಡಲ ಕಟ್ಟೆಗುಡ್ಡೆ, ಕುತ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಗುಡ್ಡೆಗಾಡು ಓಟ (ರನ್ ಫಾರ್ ನವಚೇತನ) ಸ್ಪರ್ಧೆಯೊಂದು ಡಿ.31ರ  ಬೆಳಗ್ಗೆ 6:30ಕ್ಕೆ ನಡೆಯಲಿದೆ.

ಗುಡ್ಡಗಾಡು ಓಟವು ಉದ್ಯಾವರ ಎಸ್‌ಡಿಎಂ ಆರ್ಯುವೇದ ಕಾಲೇಜಿನ ಬಳಿಯಿಂದ ಪ್ರಾರಂಭಗೊಂಡು ಉದ್ಯಾವರ ಪೇಟೆ, ಪಿತ್ರೋಡಿ, ಸಂಪಿಗೆನಗರ, ಕುತ್ಪಾಡಿಯಾಗಿ ನವಚೇತನ ಕ್ರೀಡಾಂಗಣದ ಬಳಿ ಕೊನೆಗೊಳ್ಳಲಿದೆ. ಪುರುಷರು, ಮಹಿಳೆಯರು ಹಾಗೂ ಬಾಲಕ/ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News