ಹಿರಿಯಡ್ಕ ದೇವಳದಲ್ಲಿ ‘ಗರ್ಭಾನ್ಯಾಸ’ ಕಾರ್ಯಕ್ರಮ

Update: 2017-12-30 14:51 GMT

 ಹಿರಿಯಡ್ಕ, ಡಿ.30: ನವರತ್ನ, ನವದಾನ್ಯ, ಮೃತ್ತಿಕೆಗಳೊಂದಿಗೆ ವಿಶೇಷ ರಜತ ಗರ್ಭಪಾತ್ರೆಯನ್ನು ಇಡುವುದರ ಮೂಲಕ ಹಿರಿಯಡ್ಕ  ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಶ್ರೀಬ್ರಹ್ಮಲಿಂಗೇಶ್ವರ ಗರ್ಭಗುಡಿ ಪುನರ್ ನಿರ್ಮಾಣದ ಅಂಗವಾಗಿ ಗರ್ಭಾನ್ಯಾಸ ಧಾರ್ಮಿಕ ಕಾರ್ಯಕ್ರಮ ಲಕ್ಷ್ಮೀನಾರಾಯಣ ತಂತ್ರಿ ಹಾಗೂ ಗುರುರಾಜ ತಂತ್ರಿ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಮಂಗಳಾದೇವಿ ದೇವಸ್ಥಾನದ ಆಡಳಿತ ಟ್ರಸ್ಟಿ ರಮಾನಾಥ ಹೆಗ್ಡೆ, ಶ್ರೀಕ್ಷೇತ್ರ ಹಿರಿಯಡಕ ದೇವಸ್ಥಾನ ಜೀರ್ಣೋಧ್ದಾರ ಸಮಿತಿ ಕಾರ್ಯಾಧ್ಯಕ್ಷ ಮಾಂಬೆಟ್ಟು ಗೋವರ್ಧನ ಹೆಗ್ಡೆ, ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಾಂ ಬೀಡು ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅಂಜಾರುಬೀಡು ಅಮರನಾಥ ಶೆಟ್ಟಿ, ಸಮಿತಿಯ ಇತರೆಲ್ಲ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News