×
Ad

ದೀಪಕ್ ಹತ್ಯೆ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

Update: 2018-01-03 22:39 IST

ಮಂಗಳೂರು, ಜ. 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿರುವುದಕ್ಕೆ ಇನ್ನೊಂದು ಉದಾಹರಣೆಯಾಗಿದೆ ಕಾಟಿಪಳ್ಳದ ದೀಪಕ್ ಹತ್ಯೆ. ಇದು ಅತ್ಯಂತ ಖಂಡನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷ ಮುಹಮ್ಮದ್ ಕುಂಞಿ ಪ್ರತಿಕ್ರಿಯಿಸಿದ್ದಾರೆ.

ಕಳೆದ 2-3 ವಾರಗಳಲ್ಲಿ ಜಿಲ್ಲೆಯಲ್ಲಿ ಹತ್ಯೆ, ಹತ್ಯೆ ಯತ್ನ ಮತ್ತು ಅನೈತಿಕ ಗೂಂಡಾಗಿರಿಗಾಗಿ ಸುದ್ದಿಯಲ್ಲಿದೆ. ಇದನ್ನು ಜಿಲ್ಲಾಡಳಿತದ ವೈಫಲ್ಯ ಎನ್ನಬೇಕೋ ಅಥವಾ ಕಾನೂನು ಕೈಗೆತ್ತಿಕೊಳ್ಳುವವರ ಮೇಲುಗೈ ಏನ್ನಬೇಕೋ? ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಜಿಲ್ಲೆಯ ಬಗ್ಗೆ ವಿಶೇಷ ಗಮನ ಕೊಡಬೇಕಾದ ತುರ್ತು ಅಗತ್ಯವಿದೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಇಂಥ ಘಟನೆಗಳು ಸಾಮಾನ್ಯ ಎಂದು ಸಮರ್ಥಿಸಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಜಿಲ್ಲೆಯನ್ನು ಉದ್ವಿಘ್ನ ಸ್ಥಿತಿಯಲ್ಲಿಡುವುದನ್ನೇ ಗುರಿಯಾಗಿಟ್ಟುಕೊಂಡಿರುವ ಶಕ್ತಿಗಳು ಜಿಲ್ಲೆಯಲ್ಲಿರಬಹುದು. ಅವರನ್ನು ಹದ್ದು ಬಸ್ತಿನಲ್ಲಿಡುವುದು ಜಿಲ್ಲಾಡಳಿತದ ಕರ್ತವ್ಯ. ದೀಪಕ್ ಹತ್ಯೆ ಕೋರರನ್ನು ಮತ್ತು ಕಲ್ಲಡ್ಕದ ಕೇಶವ ಹತ್ಯಾ ಯತ್ನದ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಪ್ರಯತ್ನವನ್ನು ಶ್ಲಾಘಿಸುವುದರ ಜೊತೆಗೇ ಇನ್ನಷ್ಟು ಹತ್ಯೆ, ಪ್ರತಿಕಾರಗಳ ಸರಣಿ ಮುಂದುವರಿಯದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ. ದೀಪಕ್‍ನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವುದಕ್ಕೂ ಸರಕಾರ ಮುಂದಾಗಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News