×
Ad

ಬಶೀರ್ ನಿಧನದ ಸುದ್ದಿ ವರದಿ ಮಾಡಲು ಹೋದ ಟಿವಿ ಚಾನೆಲ್ ಗೆ ‘ಪಬ್ಲಿಕ್’ ಛೀಮಾರಿ!

Update: 2018-01-07 15:47 IST

ಮಂಗಳೂರು, ಜ.7: ದುಷ್ಕರ್ಮಿಗಳ ದಾಳಿಗೊಳಗಾಗಿ ರವಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಶೀರ್ ಅವರ ನಿಧನದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಖಾಸಗಿ ಚಾನೆಲ್ ‘ಪಬ್ಲಿಕ್ ಟಿವಿ’ ವರದಿಗಾರರನ್ನು ಜನರು ಧಿಕ್ಕಾರ ಕೂಗಿ ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.

ದೀಪಕ್ ರಾವ್ ಹತ್ಯೆಯ ನಂತರ ಕೊಟ್ಟಾರಚೌಕಿಯಲ್ಲಿ ಬಶೀರ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ರನ್ನು ಆ್ಯಂಬುಲೆನ್ಸ್ ಚಾಲಕರಾದ ರೋಹಿತ್ ಹಾಗು ಶೇಖರ್ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬಶೀರ್ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಬಶೀರ್ ನಿಧನದ ಸುದ್ದಿಯನ್ನು ವರದಿ ಮಾಡಲು ಹಲವು ಚಾನೆಲ್ ಗಳ ವರದಿಗಾರರು ಆಸ್ಪತ್ರೆಯ ಬಳಿ ಸೇರಿದ್ದರು. ಈ ಸಂದರ್ಭ ‘ಪಬ್ಲಿಕ್ ಟಿವಿ’ಯ ವರದಿಗಾರ ಹಾಗು ಕ್ಯಾಮರಾಮ್ಯಾನ್ ಸ್ಥಳಕ್ಕಾಗಮಿಸಿದ್ದು, ಆಸ್ಪತ್ರೆಯ ಬಳಿ ಸೇರಿದ್ದ ನೂರಾರು ಮಂದಿ ‘ಪಬ್ಲಿಕ್ ಟಿವಿಗೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಿದರು.

ಪಬ್ಲಿಕ್ ಟಿವಿಗೆ ಛೀಮಾರಿ ಹಾಕಿ ನಿಧನದ ಸುದ್ದಿಯನ್ನು ವರದಿ ಮಾಡದಂತೆ ವರದಿಗಾರರನ್ನು ಹಿಂದಕ್ಕೆ ಕಳುಹಿಸಿದರು. ಪಬ್ಲಿಕ್ ಟಿವಿಗೆ ಜನರು ಧಿಕ್ಕಾರ ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News