*ಅಲ್ ಮದೀನಾ ಮಂಜನಾಡಿ: ಅಲ್ ಕೋಬರ್ ಘಟಕಕ್ಕೆ ನೂತನ ಸಾರಥ್ಯ

Update: 2018-01-08 12:56 GMT

ಮಂಜನಾಡಿ, ಜ. 8: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿ ದಮ್ಮಾಮ್ ವಲಯದ ಅದೀನದ ಅಲ್ ಕೋಬರ್ ಘಟಕದ ಮಹಾಸಭೆಯು  ಕೆಸಿಎಫ್ ಹಾಲ್ ನಲ್ಲಿ ಅಬ್ದುಲ್ ಖಾದರ್ ಜಿಎಂಸಿ ಅವರ ಅಧ್ಯಕ್ಶತೆಯಲ್ಲಿ ಜರಗಿತು.

 ಉಸ್ತಾದ್ ಅಬ್ದುಲ್ ರಝಾಕ್ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಉಸ್ತಾದ್ ಅಬ್ದುಲ್ಲಾ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಲ್ ಮದೀನಾದ ಹಿರಿಯ ನೇತಾರ  ಎನ್ ಎಸ್ ಅಬ್ದುಲ್ಲಾ  ಸ್ವಾಗತಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರ. ಕಾರ್ಯದರ್ಶಿ ಇಬ್ರಾಹೀಂ ಕನ್ನಂಗಾರ್ ವಾಚಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು.

ಮಹಾಸಭೆಯಲ್ಲಿ ಚುಣಾವನಾಧಿಕಾರಿಯಾಗಿ ವಲಯಾ ಸಮಿತಿ ಪ್ರಕಾರ್ಯದರ್ಶಿ ಇಕ್ಬಾಲ್ ಮಲ್ಲೂರ್ 2018 ರ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಿದರು.

ಗೌರವಾಧ್ಯಕ್ಷರಾಗಿ ಸೌದ್ ಸುರಲ್ಪಾಡಿ, ಅಧ್ಯಕ್ಷರಾಗಿ ಅಶ್ರಫ್ ಸಹರ, ಉಪಾದ್ಯಕ್ಷರಾಗಿ ಎನ್ ಎಸ್. ಅಬ್ದುಲ್ಲಾ, ರಹೀಂ ಉಚ್ಚಿಲ, ಪ್ರ. ಕಾರ್ಯದರ್ಶಿಯಾಗಿ ಇಬ್ರಾಹಿಂ ಕನ್ನಂಗಾರ್, ಸಹಕಾರ್ಯದರ್ಶಿ: ಅಶ್ರಫ್ ತಲಪಾಡಿ, ಸಹ ಕಾರ್ಯದರ್ಶಿ: ಜಮಾಲ್ ಬಜ್ಪೆ, ಕೋಶಾಧಿಕಾರಿ : ಅಬ್ದುಲ್ ರಝಾಕ್ ಸಖಾಫಿ, ಸಂಘಟನಾ ಕಾರ್ಯದರ್ಶಿ: ಇಲ್ಯಾಸ್ ಕನ್ನಂಗಾರ್, ಸಲಹೆಗಾರರು: ಅಬ್ದುಲ್ಲಾ ಫೈಝಿ, ಸಲಹೆಗಾರರು: ಝ್ಯೆನುಲ್ ಆಬೀದೀನ್ ಝುಹ್ರಿ, ಹಾಗೂ 10 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ವಲಯ ಸಮಿತಿಯ ಅಧ್ಯಕ್ಷರಾದ  ಇಝ್ಝುದ್ದೀನ್ ಮುಸ್ಲಿಯಾರ್, ವಲಯ ಸಮಿತಿ ಕೋಶಾಧಿಕಾರಿ ಇಸ್ಮಾಯಿಲ್ ಪೊಯ್ಯಲ್, ದಮಾಮ್ ಘಟಕಾಧ್ಯಕ್ಷ ಕಾಸಿಮ್ ಅಡ್ಡೂರ್, ಉದ್ಯಮಿ ಸೌದ್ ಸುರಲ್ಪಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 ಸಹ ಕಾರ್ಯದರ್ಶಿ ಅಶ್ರಫ್ ಕೆಸಿರೋಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News