ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್, ಬಶೀರ್ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ
Update: 2018-01-09 22:40 IST
ಮಂಗಳೂರು, ಜ. 9: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಮತ್ತು ಆಕಾಶಭವನ ಬಶೀರ್ರ ಮನೆಗೆ ಚಿತ್ರನಟ ಇಂದ್ರಜಿತ್ ಲಂಕೇಶ್ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ ತಲಾ 25 ಸಾವಿರ ರೂ.ನ ಚೆಕ್ ವಿತರಿಸಿದರು.
ಈ ಸಂದರ್ಭ ತುಳುಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಉಪಸ್ಥಿತರಿದ್ದರು.