ಶಿವಯೋಗಿ ಶ್ರೀಸಿದ್ಧರಾಮ ಜಯಂತಿ
Update: 2018-01-12 21:08 IST
ಉಡುಪಿ, ಜ.12: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಳಂದ ಸಭಾಭವನದಲ್ಲಿ ಜ.16ರಂದು ಬೆಳಗ್ಗೆ 10:30ಕ್ಕೆ ಶಿವಯೋಗಿ ಶ್ರೀ ಸಿದ್ಧರಾಮ ಜಯಂತಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಲಿದ್ದಾರೆ. ಕಾಲೇಜು ಉಪನ್ಯಾಸಕ ಡಾ. ರಾಜೇಂದ್ರ ಎಸ್ ನಾಯಕ್ ಶಿವಯೋಗಿ ಶ್ರೀ ಸಿದ್ದರಾಮರ ಕುರಿತು ವಿಶೇಷ ಉಪನ್ಯಾಸ ನಿೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ