​ಮಹಾಲಿಂಗೇಶ್ವರ ಜಾತ್ರೆ ಪ್ರಯುಕ್ತ ಜ.15ರಂದು ತಾಳಮದ್ದಳೆ

Update: 2018-01-12 16:35 GMT

ಮಂಗಳೂರು, ಜ. 12: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಜ.15ರಂದು ಸಂಜೆ ಪದವಿನಂಗಡಿ ದುರ್ಗಾಕಟ್ಟೆಯ ಬಳಿ 'ಮೋಕ್ತ ಸಂಗ್ರಾಮ' ಯಕ್ಷಗಾನ ತಾಳ ಮದ್ದಳೆ ಜರಗಲಿದೆ.

ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ತಾಳ ಮದ್ದಳೆ ನಡೆಸಿಕೊಡಲಿದ್ದಾರೆ. ಬಳಿಕ ರಾತ್ರಿ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಬರೆದಿರುವ 'ಕಡಲ ಮಗೆ' ತುಳು ನಾಟಕ ಪ್ರದರ್ಶಿತವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News