ಮೂಡುಬಿದಿರೆ: ಹಾವು ಕಡಿದು ಯುವಕ ಮೃತ್ಯು

Update: 2018-01-12 17:37 GMT

ಮಂಗಳೂರು, ಜ. 12: ಕಳೆದ 10 ವರ್ಷಗಳಿಂದ ಹಾವು ಹಿಡಿಯುವುದರಲ್ಲಿ ನಿಪುಣನಾಗಿರುವ ಮೂಡುಬಿದಿರೆ ಅಲಂಗಾರಿನ ನಿವಾಸಿ ಡಾಲ್ಪಿ (33) ಎಂಬವರು ಶುಕ್ರವಾರ ಸಂಜೆ ನಾಗರ ಹಾವನ್ನು ಹಿಡುಯತ್ತಿದ್ದ ಸಂದರ್ಭದಲ್ಲಿ ಅದರ ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಅಲಂಗಾರಿನ ದಿ. ಡೇವಿಡ್ ಮತ್ತು ಬಿಜು ದಂಪತಿಯ ಪುತ್ರ ಡಾಲ್ಫಿ ಹಾವು ಹಿಡಿಯುವುದರಲ್ಲಿ ನಿಸ್ಸೀಮ. ಮನೆ, ಕಟ್ಟಡ, ಹಾಡಿ ಇತ್ಯಾದಿ ಕಡೆಗಳಲ್ಲಿ ಹಾವನ್ನು ಕಂಡರೆ ಸ್ಥಳೀಯ ಮೊದಲು ನೆನಪಿಸುವುದು ಡಾಲ್ಫಿಯವರನ್ನು. ಶುಕ್ರವಾರ ಸಂಜೆ ಅಲಂಗಾರು ಸಮೀಪದ ನಾಗರಕಟ್ಟೆಯ ರಾಜೇಂದ್ರ ಕಿಣಿ ಎಂಬವರ ಅಂಗಳದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಕೂಡಲೇ ಅವರು ಅಲಂಗಾರಿಗೆ ಬಂದು ಡಾಲ್ಫಿಯವರನ್ನು ಭೇಟಿ ಮಾಡಿ ಕರೆದುಕೊಂಡು ಹೋಗಿದ್ದಾರೆ.

ಕಿಣಿ ಅವರ ಅಂಗಳದಲ್ಲಿದ್ದ ನಾಗರ ಹಾವನ್ನು ಹಿಡಿಯುವಾಗಲೇ ಹಾವು ಕಚ್ಚಿದ ಪರಿಣಾಮ ಕುಸಿದು ಬಿದ್ದಿದ್ದ ಡಾಲ್ಫಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವಿವಾಹಿತರಾಗಿರುವ ಡಾಲ್ಫಿ ಅವರು ತಾಯಿ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News