ಕಾಪು - ಹೆಜಮಾಡಿ: ರೋಟರಿ ಸೈಕ್ಲಥೋನ್ ಸೈಕಲ್ ಜಾಥಾ
ಪಡುಬಿದ್ರಿ, ಜ. 14: ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಜಲ ಸಂರಕ್ಷಣೆ, ರಸ್ತೆ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರುದ್ಧ ರವಿವಾರ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆವರಣದಿಂದ ಹೆಜಮಾಡಿಯವರೆಗೆ ಸೈಕಲ್ ಜಾಥಾ ಸೈಕ್ಲಥೋನ್-2018ಕ್ಕೆ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಚಾಲನೆ ನೀಡಿ ಮಾತನಾಡಿ. ಭವಿಷ್ಯದ ಹಿತದೃಷ್ಠಿಯಿಂದ ನೀರಿನ ಸಂರಕ್ಷಣೆಗೆ ಒತ್ತು ನೀಡು ವುದು ಪ್ರತೀಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮನೆ ಮನೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಅನುಷ್ಠಾನಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಂಘ-ಸಂಸ್ಥೆಗಳು ಮುಂದೆ ಬರಬೇಕು ಎಂದರು.
ಕಾರ್ಕಳ ಎಎಸ್ಪಿ ಹೃಷಿಕೇಷ್ ಸೋನಾವಣೆ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಗಮನ ಹರಿಸಿದರೆ ಅಪಘಾತ ಮುಕ್ತ ಸಮಾಜ ನಿರ್ಮಾಣ ಸಾಧ್ಯವಿದೆ. ಆದರ ಜೊತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡುವ ನಿಟ್ಟಿನಲ್ಲಿ ಪ್ರತೀಯೋರ್ವ ನಾಗರಿಕನೂ ಮುಂದಾಗಬೇಕಿದೆ. ಸೈಕ್ಲತಾನ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಅದರೊಂದಿಗೆ ಮುನಷ್ಯನ ದೇಹಕ್ಕೆ ಪೂರಕವಾಗುವ ದೈಹಿಕ ಅಭ್ಯಾಸವೂ ಸೈಕ್ಲತಾನ್ ಮೂಲಕ ದೊರಕುತ್ತದೆ ಎಂದರು.
ಸುಮಾರು 15 ಕಿ. ಮೀ.ವರೆಗೆ ನಡೆದ ಸೈಕಲ್ ಜಾಥಾವು ಕಾಪುವಿನಿಂದ ಉಚ್ಚಿಲ, ಎರ್ಮಾಳು, ಪಡುಬಿದ್ರಿ ಮೂಲಕ ಹೆಜಮಾಡಿಯ ಟೋಲ್ಗೇಟ್ ಮೂಲಕ ಹೆಜಮಾಡಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೊನೆಗೊಂಡಿತು. ಹೆಜಮಾಡಿ ಬೈಪಾಸ್ನಿಂದ ಹೆಜಮಾಡಿ ಗ್ರಾಮ ಪಂಚಾಯ್ತಿವರೆಗೆ ಒಂದು ಕಿ.ಮೀ. ನಡಿಗೆ ನಡೆಯಿತು. ನಡಿಗೆಯಲ್ಲಿ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಗಣ್ಯರು ಭಾಗವಹಿಸಿದ್ದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ.ಪಿ. ಆಚಾರ್ಯ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ಪ್ರೈಮ್ ಟಿ.ವಿ.ಯ ಆಡಳಿತ ನಿರ್ದೇಶಕ ದಿನೇಶ್ ಕಿಣಿ, ಪಡುಬಿದ್ರಿ ಸಿ.ಎ. ಬ್ಯಾಂಕ್ ಅಧ್ಯಕ್ಷ ವೈ. ಸುಧೀರ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಸಿನಿ ತಾರೆಯರಾದ ಪೃಥ್ವಿ ಅಂಬರ್, ಅನೂಪ್ ಸಾಗರ್, ರಂಜಿತಾ ಶೇಟ್, ಜೆನ್ನಿಫರ್ ಸ್ನೇಹಾ, ಆರಾಧ್ಯ ಶೆಟ್ಟಿ, ಶ್ಲಾಘಾ ಸಾಲಿಗ್ರಾಮ, ಉಚ್ಚಿಲ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಹರೀಶ್ ಶೆಟ್ಟಿ ಪೊಲ್ಯ, ಮಣಿಪುರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ವಲಯ ಸೇನಾನಿ ಕೃಷ್ಣ ಪಿ. ಬಂಗೇರ, ರೋಟರಿ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಇಸ್ಮಾಯಿಲ್ ಪಲಿಮಾರು, ಬುಡಾನ್ ಸಾಹೇಬ್, ಗಣೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಪಡುಬಿದ್ರಿ ರೋಟರಿ ಕ್ಲಬ್ನ ಅಧ್ಯಕ್ಷ ರಮೀರ್ ಹುಸೈನ್ ಸ್ವಾಗತಿಸಿದರು.ಕಾರ್ಯದರ್ಶಿ ಸಂದೀಪ್ ಪಲಿಮಾರು ವಂದಿಸಿದರು. ಕಾರ್ಯಕ್ರಮ ನಿರ್ದೇಶಕ ಸಂತೋಷ್ ಪಡುಬಿದ್ರಿ ಮತ್ತು ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಶಾಸಕ ವಿನಯಕುಮಾರ್ ಸೊರಕೆ ಕರಪತ್ರ ಬಿಡುಗಡೆಗೊಳಿಸಿದರು. ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ,ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಉಪಾಧ್ಯಕ್ಷ ಸುಧಾಕರ ಕರ್ಕೇರ,ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಜೆಡಿಎಸ್ ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ ಹೆಜಮಾಡಿ, ಉಡುಪಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಡಾ.ಗುರುರಾಜ್, ಮೂಡಿಗೆರೆ ಕೌಸರ್ ಗ್ರೂಪ್ ಆಫ್ ಕನ್ಸರ್ನ್ನ ಮ್ಯಾನೇಜಿಂಗ್ ಡೈರೆಕ್ಟರ್ ಕೆಎಮ್ ಅಬ್ದುಲ್ಲಾ, ಉಡುಪಿ ಜಿಲ್ಲಾ ಹಿಂದು ಯುವ ಸೇನೆ ಅಧ್ಯಕ್ಷ ಮಂಜು ಕೊಳ, ಬಿಎಸ್ ಆಚಾರ್ಯ, ಇಸ್ಮಾಯಿಲ್ ಪಲಿಮಾರ್, ಸುಧಾಕರ ಕೆ. ಮತ್ತಿತರರು ವೇದಿಕೆಯಲ್ಲಿದ್ದರು.
ಸೈಕಲ್ನಲ್ಲಿ ಎಎಸ್ಪಿ: ಕಾರ್ಕಳ ಎಎಸ್ಪಿ ಹೃಷಿಕೇಶ್ ಸೋನಾವಾಣೆ ಕಾಪುವಿನಿಂದ ಉಚ್ಚಿಲ ತನಕ ಸೈಕ್ಲಿಂಗ್ ನಡೆಸಿ ಸೈಕಲ್ ಸವಾರರಿಗೆ ಸ್ಪೂರ್ತಿ ತುಂಬಿ ಗಮನ ಸೆಳೆದರು.
ಜೋಸೆಫ್ ಜಿಎಮ್ ರೆಬೆಲ್ಲೋ ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. 15 ಕಿಮೀ ಕ್ರಮಿಸಿದ ಸೈಕ್ಲೋಥಾನ್ಗೆ ಚಲನಚಿತ್ರ ನಟನಟಿಯರಾದ ರಾಧಿಕಾ ರಾವ್, ಪ್ರಥ್ವಿ ಅಂಬರ್, ಆರಾಧ್ಯ ಶೆಟ್ಟಿ, ಜೆನ್ನಿಫರ್ ಸ್ನೇಹಾ, ರಂಜಿತಾ ಶೇಠ್, ವಿಸ್ಮಯ ವಿನಾಯಕ್, ಶ್ಲಾಘಾ ಸಾಲಿಗ್ರಾಮ ತೆರೆದ ಜೀಪ್ ಮೂಲಕ ಸಾಥ್ ನೀಡಿದರು.
ಭಾಗವಹಿಸಿದವರು: ಉಡುಪಿ ಸೈಕ್ಲಿಂಗ್ ಕ್ಲಬ್ ಮತ್ತು ಮೂಲ್ಕಿ ಮಂತ್ರ ಸರ್ಫ್ ಕ್ಲಬ್ ಸದಸ್ಯರು, ಮೂಳೂರು ಅಲ್ ಇಹ್ಸಾನ್ ಶಾಲೆ, ಕಾಪು ವಿದ್ಯಾನಿಕೇತನ್ ಶಾಲೆ, ಉಚ್ಚಿಲ ಮಹಾಲಕ್ಷ್ಮೀ ಶಾಲೆ, ಕಾಪು ಮಹಾದೇವಿ ಶಾಲೆ, ಉಚ್ಚಿಲ ಸರಸ್ವತಿ ಮಂದಿರ ಶಾಲೆ, ಮೂಳೂರು ಸಿಎಸ್ಐ ಶಾಲೆ, ಹೆಜಮಾಡಿ ಅಲ್ ಅರ್ಹರ್ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪಡುಬಿದ್ರಿ ರೋಟರಿ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ 350ಕ್ಕೂ ಅಧಿಕ ಸೈಕಲ್ಪಟುಗಳು ಕಾಪುವಿನಿಂದ ಹೆಜಮಾಡಿ ತನಕ ಸುಮಾರ್ 15 ಕಿಮೀ ಸೈಕ್ಲೋಥಾನ್ನಲ್ಲಿ ಭಾಗವಹಿಸಿದರು.