ಭಟ್ಕಳ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

Update: 2018-01-14 16:24 GMT

ಭಟ್ಕಳ, ಜ. 14: ರವಿವಾರ ಬೆಳಗಿನ ಜಾವ ಇಲ್ಲಿನ ಬಂಗಾರಮಕ್ಕಿ ಕ್ರಾಸ್ ಬಳಿ ಶಿವಮೊಗ್ಗದ ಅರಸೀಕೆರೆಯಿಂದ ಶಿಲ್ಪಿ ಕೆಲಸಕ್ಕೆಂದು ತೆರಳಿ ಮುರ್ಡೇಶ್ವರದ ಮನೆಗೆ ವಾಪಸ್ಸು ಬರುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.

ಮೃತ ಬೈಕ್ ಸವಾರ ಇಲ್ಲಿನ ಕಾಯ್ಕಿಣಿ ಗ್ರಾ. ಪಂ. ವ್ಯಾಪ್ತಿಯ ತೆರ್ನಮಕ್ಕಿ ಚರ್ಚ ಕ್ರಾಸ್ ನಿವಾಸಿ ಮನೋಜ ಮಾದೇವ ನಾಯ್ಕ (21) ಎಂದು ತಿಳಿದು ಬಂದಿದ್ದು, ಹಿಂಬದಿ ಬೈಕ್ ಸವಾರ ಮುರ್ಡೇಶ್ವರದ ಜನತಾ ಕಾಲನಿ ನಿವಾಸಿ ಮಹೇಶ ಪಾಂಡು ನಾಯ್ಕ (22) ಎಂದು ಗುರುತಿಸಲಾಗಿದೆ.

ಇಬ್ಬರು ತಮ್ಮ ಶಿಲ್ಪಿ ಕೆಲಸವನ್ನು ಮುಗಿಸಿ ಕೋಗಾರ ರಸ್ತೆ ಮಾರ್ಗವಾಗಿ ಭಟ್ಕಳದಿಂದ ಮುರ್ಡೇಶ್ವರದ ಅವರ ಮನೆಗೆ ತೆರಳುತ್ತಿದ್ದ ವೇಳೆ  ಬೈಕ್ ಸ್ಕಿಡ್ ಆಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮುರ್ಡೇಶ್ವರ ಪಿಎಸೈ ನಾಗವ್ವ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News